ADVERTISEMENT

ಅಮರನಾಥ ಯಾತ್ರಿಕರ ಏರ್‌ಲಿಫ್ಟ್‌ ಮಾಡಲು ವಾಯುಪಡೆಯ ಸಿ–17 ವಿಮಾನ?

ಜಮ್ಮು–ಕಾಶ್ಮೀರ

ಏಜೆನ್ಸೀಸ್
Published 3 ಆಗಸ್ಟ್ 2019, 12:45 IST
Last Updated 3 ಆಗಸ್ಟ್ 2019, 12:45 IST
   

ಶ್ರೀನಗರ: ಅಮರನಾಥ ಯಾತ್ರೆಯ ಯಾತ್ರಿಕರನ್ನು ಏರ್‌ಲಿಫ್ಟ್‌ ಮಾಡುವಂತೆಭಾರತೀಯ ವಾಯುಪಡೆಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮನವಿ ಮಾಡಿದೆ. ಯಾತ್ರಿಕರನ್ನು ಕಾಶ್ಮೀರ ಕಣಿವೆಯಿಂದ ಜಮ್ಮು, ಪಠಾಣ್‌ಕೋಟ್‌ ಅಥವಾ ದೆಹಲಿಗೆ ತಲುಪಿಸುವ ಮೂಲಕ ಸುರಕ್ಷಿತವಾಗಿ ಅವರ ಊರುಗಳಿಗೆ ಸೇರಲು ಅನುವಾಗುವಂತೆ ಕೋರಿದೆ.

ದೇಶದ ಪ್ಯಾರಾಮಿಲಿಟರಿ ಪಡೆಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿ–17 ಸಾಗಾಣಿಕೆ ವಿಮಾನವು ಅಮರನಾಥ ಯಾತ್ರಿಕರನ್ನು ಕಾಶ್ಮೀರದಿಂದ ಹೊರಗೆ ಕರೆದೊಯ್ಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿಎಎನ್‌ಐ ವರದಿ ಮಾಡಿದೆ.

ಬೋಯಿಂಗ್‌ ನಿರ್ಮಿತ ಸಿ–17 ಗ್ಲೋಬ್‌ಮಾಸ್ಟರ್‌ ವಿಮಾನವು ಒಮ್ಮೆಗೆ 230 ಪ್ರಯಾಣಿಕರನ್ನು ಏರ್‌ಲಿಫ್ಟ್‌ ಮಾಡುವ ಸಾಮರ್ಥ್ಯ ಹೊಂದಿದೆ. ರಷ್ಯಾದ ಇಲ್ಯುಷಿನ್‌–76 ವಿಮಾನಕ್ಕೆ ಹೋಲಿಸಿದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಿ–17 ಕಡಿಮೆ ಸಮಯದಲ್ಲಿ ಪ್ರಯಾಣ ಪೂರೈಸುತ್ತದೆ.

ADVERTISEMENT

ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಆತಂಕ ದಟ್ಟವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಯಾತ್ರಿಕರು ಮತ್ತು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರದಿಂದ ಆದಷ್ಟು ಬೇಗನೆ ಮರಳುವಂತೆ ಜಮ್ಮು–ಕಾಶ್ಮೀರ ಸರ್ಕಾರ ಶುಕ್ರವಾರ ಪ್ರಕಟಣೆ ಹೊರಡಿಸಿದೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.