ತಿರುವನಂತಪುರ: ತಮ್ಮ ಅಧಿಕೃತ ಕಾರು ವೇಗ ಮಿತಿ ಉಲ್ಲಂಘಿಸಿದ್ದಕ್ಕಾಗಿ ಅಗತ್ಯ ದಂಡ ಪಾವತಿಸುವಂತೆ ಕೇರಳ ರಾಜ್ಯಪಾಲ ಪಿ. ಸದಾಶಿವಂ ತಮ್ಮ ಕಚೇರಿ ಸಿಬ್ಬಂದಿಗೆ ಸೂಚಿಸಿದ್ದಾರೆ.
ಎರಡು ತಿಂಗಳ ಹಿಂದೆ ಈ ಉಲ್ಲಂಘನೆ ನಡೆದ ವೇಳೆ ರಾಜ್ಯಪಾಲರು ಕಾರಿನಲ್ಲಿ ಇರಲಿಲ್ಲ. ಆದರೆ, ಅವರ ಕಾರು ಚಾಲಕ ಸಂಚಾರನಿಯಮ ಉಲ್ಲಂಘಿಸಿದ್ದುದು ವೇಗ ನಿಯಂತ್ರಣ ಪತ್ತೆ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಇದನ್ನು ಆಧರಿಸಿ ಸಾರಿಗೆ ಇಲಾಖೆ ಇತ್ತೀಚೆಗೆ ರಾಜಭವನಕ್ಕೆ ಚಲನ್ ಕಳುಹಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.