ADVERTISEMENT

ಖಿನ್ನತೆಗೆ ಒಳಗಾದವರಿಗೆ ಮದ್ಯ ಖರೀದಿಸಲು ವಿಶೇಷ ಪಾಸ್‌: ಕೇರಳ ನಿರ್ಧಾರ

ಪಿಟಿಐ
Published 1 ಏಪ್ರಿಲ್ 2020, 0:54 IST
Last Updated 1 ಏಪ್ರಿಲ್ 2020, 0:54 IST
   

ತಿರುವನಂತಪುರಂ: ಮದ್ಯ ಸಿಗದೇ ಖಿನ್ನತೆಗೆ ಒಳಗಾಗಿರುವವರಿಗೆ ವೈದ್ಯರು ನೀಡುವ ಸಲಹಾ ಚೀಟಿಯನ್ನು ಆಧರಿಸಿ ಅಬಕಾರಿ ಇಲಾಖೆಯಿಂದ ಮದ್ಯವನ್ನು ಖರೀದಿಸಲು ವಿಶೇಷ ಪಾಸ್‌ಗಳನ್ನು ವಿತರಿಸಲು ಕೇರಳ ಸರ್ಕಾರ ತೀರ್ಮಾನಿಸಿದೆ.

ವೈದ್ಯರ ಸಂಘದ ವಿರೋಧದ ನಡುವೆಯೂ ಈ ಕುರಿತು ಸೋಮವಾರ ಸರ್ಕಾರಿ ಆದೇಶ ಹೊರಬಿದ್ದಿದೆ. 21 ದಿನಗಳ ಲಾಕ್‌ ಡೌನ್‌ ಅವಧಿಯಲ್ಲಿ ವೈದ್ಯರ ಸಲಹಾ ಚೀಟಿ ಆಧರಿಸಿ ಮದ್ಯ ಖರೀದಿಸಲು ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.