ADVERTISEMENT

ಮುಂಬೈ ತಲುಪಿದ ಪೈಲಟ್‌ ಸಾಠೆ ಮೃತದೇಹ

ಪಿಟಿಐ
Published 9 ಆಗಸ್ಟ್ 2020, 13:47 IST
Last Updated 9 ಆಗಸ್ಟ್ 2020, 13:47 IST
ದೀಪಕ್‌ ಸಾಠೆ
ದೀಪಕ್‌ ಸಾಠೆ   

ಮುಂಬೈ: ಕೋಯಿಕ್ಕೋಡ್‌ನಲ್ಲಿ ನಡೆದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಅಪಘಾತದಲ್ಲಿ ಮೃತಪ‍ಟ್ಟ ಪೈಲಟ್‌ ಕ್ಯಾಪ್ಟನ್‌ ದೀಪಕ್‌ ಸಾಠೆ ಅವರ ಪಾರ್ಥಿವ ಶರೀರ ಭಾನುವಾರ ಮಧ್ಯಾಹ್ನ ವಿಮಾನದ ಮುಖಾಂತರ ಇಲ್ಲಿಗೆ ತಲುಪಿದೆ.

ವಿಮಾನ ನಿಲ್ದಾಣದಎರಡನೇ ಟರ್ಮಿನಲ್ ಬಳಿ ಇರುವ ಏರ್‌ ಇಂಡಿಯಾ ಕಚೇರಿಯಲ್ಲಿ ಕೆಲ ಕಾಲ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಸಾಠೆ ಅವರ ಪತ್ನಿ ಸುಶ್ಮಾ ಹಾಗೂ ಮಗ ಸ್ಥಳದಲ್ಲಿ ಇದ್ದರು. ಪೈಲಟ್‌ಗಳು ಹಾಗೂ ಏರ್‌ ಇಂಡಿಯಾ ಸಿಬ್ಬಂದಿ ಸಾಠೆ ಅವರ ಮೃತದೇಹಕ್ಕೆ ಪುಷ್ಪ ಸಮರ್ಪಣೆ ಮಾಡುವ ಮುಖಾಂತರ ಕಂಬನಿ ಮಿಡಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT