ADVERTISEMENT

ತೀಸ್ತಾ ಬಂಧನ ಪ್ರಜಾಸತ್ತಾತ್ಮಕತೆ ಬಯಸುವವರಿಗೆ ಒಡ್ಡಿದ ಬೆದರಿಕೆ: ಎಡ ಪಕ್ಷಗಳು

‘ಪ್ರಜಾಸತ್ತಾತ್ಮಕ ವ್ಯವಸ್ಥೆ ಬಯಸುವವರಿಗೆ ಒಡ್ಡಿರುವ ಬೆದರಿಕೆ’

ಪಿಟಿಐ
Published 26 ಜೂನ್ 2022, 14:00 IST
Last Updated 26 ಜೂನ್ 2022, 14:00 IST
ತೀಸ್ತಾ ಸೆಟಲ್‍ವಾಡ್
ತೀಸ್ತಾ ಸೆಟಲ್‍ವಾಡ್   

ನವದೆಹಲಿ:ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‍ವಾಡ್ ಅವರ ಬಂಧನವನ್ನು ಎಡ ಪಕ್ಷಗಳು ತೀವ್ರವಾಗಿ ಖಂಡಿಸಿವೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ–ಎಂ, ತೀಸ್ತಾ ಅವರ ಬಂಧನವು ಪ್ರಜಾಸತ್ತಾತ್ಮಕ ವ್ಯವಸ್ಥೆ ಬಯಸುವವರಿಗೆ ಒಡ್ಡಿರುವ ಬೆದರಿಕೆ ಎಂದು ಆರೋಪಿಸಿದೆ. ಬಂಧನವು ಪ್ರಜಾಪ್ರಭುತ್ವದಲ್ಲಿ ನಾಗರಿಕರ ಹಕ್ಕುಗಳನ್ನು ಕಸಿಯುವ ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ತೀಸ್ತಾ ಅವರನ್ನು ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಶನಿವಾರ ಮುಂಬೈನಲ್ಲಿ ಬಂಧಿಸಿತ್ತು. ಬಳಿಕ ನಕಲಿ ಸಹಿ, ಕ್ರಿಮಿನಲ್ ಪಿತೂರಿ ಮತ್ತಿತರ ಪ್ರಕರಣದಲ್ಲಿ ಭಾನುವಾರ ಅಹಮದಾಬಾದ್‌ ಕ್ರೈಂ ಬ್ರಾಂಚ್‌ಗೆ ಅವರನ್ನು ಹಸ್ತಾಂತರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.