ಲೋಕಸಭಾ ಚುನಾವಣೆಯು ಬಿಜೆಪಿಗೆ ಮರಣದ ಗಂಟೆ ಬಾರಿಸಲಿದ್ದು, ಮೋದಿ ಅವರ ಭಯದ ಆಳ್ವಿಕೆ ಕೊನೆಯಾಗಲಿದೆ. ಚುನಾವಣೆಗೆ ಹಣ ಹಂಚಲು ವಿವಿಐಪಿ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನಗಳ ಮೂಲಕ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ರಫೇಲ್ ಹಗರಣ ಕುರಿತು ರಾಹುಲ್ ಹೇಳುತ್ತಿರುವ ಎಲ್ಲ ಮಾತಿಗೂ ನನ್ನ ಸಹಮತವಿದೆ. ಎನ್.ರಾಮ್ ಅವರಂತಹ ಪತ್ರಕರ್ತರನ್ನುಅವರು (ಬಿಜೆಪಿ) ಬೆದರಿಸುತ್ತಿದ್ದಾರೆ.
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
-------------
ರಾಷ್ಟ್ರೀಯ ಲೋಕಸಮತಾ ಪಕ್ಷದ (ಆರ್ಎಲ್ಎಸ್ಪಿ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ವಿರುದ್ಧ ಇಂದು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿದ್ದೇನೆ. ಪೂರ್ವ ಚಂಪಾರಣ್ ಕ್ಷೇತ್ರದ ಟಿಕೆಟ್ ನೀಡಲು ಡಿಸೆಂಬರ್ 12, 2018ರಲ್ಲಿ ಕುಶ್ವಾಹ ಅವರು ನನ್ನಿಂದ ಎರಡು ಕಂತುಗಳಲ್ಲಿ 90 ಲಕ್ಷಹಣ ಪಡೆದಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು
ಪ್ರದೀಪ್ ಮಿಶ್ರಾ, ರಾಷ್ಟ್ರೀಯ ಲೋಕಸಮತಾ ಪಕ್ಷದ ಉಚ್ಚಾಟಿತ ಸದಸ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.