ADVERTISEMENT

ರೈತರಿಗೆ ₹10 ಸಾವಿರ ಕೋಟಿ ನೆರವು: ಫಡಣವೀಸ್‌

ಪಿಟಿಐ
Published 2 ನವೆಂಬರ್ 2019, 19:54 IST
Last Updated 2 ನವೆಂಬರ್ 2019, 19:54 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌    

ಮುಂಬೈ: ಅಕಾಲಿಕ ಮಳೆಯಿಂದಾಗಿ ನಷ್ಟ ಅನುಭವಿಸಿದ ರೈತರಿಗೆ ₹10 ಸಾವಿರ ಕೋಟಿಯ ತಕ್ಷಣದ ನೆರವನ್ನು ಮಹಾರಾಷ್ಟ್ರ ಸರ್ಕಾರ ಶನಿವಾರ ಘೋಷಿಸಿದೆ.

ರೈತರು ಅನುಭವಿಸಿದ ನಷ್ಟದ ಕುರಿತು ಅವರ ಗೃಹ ಕಚೇರಿಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಈ ನಿರ್ಧಾರ ಕೈಗೊಂಡರು.

325 ತಾಲ್ಲೂಕುಗಳಲ್ಲಿ ಹರಡಿಕೊಂಡಿರುವ 54.22 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

ಬಿಜೆಪಿಯ ಸಚಿವರು ಮತ್ತು ಮಿತ್ರಪಕ್ಷಗಳ ಸಚಿವರು ಸಭೆಯಲ್ಲಿದ್ದರು. ಜಲ ಸಂಪನ್ಮೂಲ ಮತ್ತು ಜನ ಸಂರಕ್ಷಣೆ ರಾಜ್ಯ ಸಚಿವ, ವಿಜಯ್‌ ಶಿವತಾರೆ ಒಬ್ಬರೇ ಶಿವಸೇನೆಯಿಂದ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.