ADVERTISEMENT

ವಂಚನೆ, ಫೋರ್ಜರಿ ಪ್ರಕರಣ: ಮಹಾ ಸಚಿವ ಕೊಕಾಟೆ ಅವರ ಖಾತೆಗಳನ್ನು ಹಿಂಪಡೆದ ರಾಜ್ಯಪಾಲ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 16:16 IST
Last Updated 18 ಡಿಸೆಂಬರ್ 2025, 16:16 IST
<div class="paragraphs"><p>ಮಾಣಿಕರಾವ್‌ ಕೊಕಾಟೆ</p></div>

ಮಾಣಿಕರಾವ್‌ ಕೊಕಾಟೆ

   

ಚಿತ್ರ: ಎಕ್ಸ್‌

ಮುಂಬೈ: ವಂಚನೆ ಹಾಗೂ ಫೋರ್ಜರಿ ಪ್ರಕರಣದಲ್ಲಿ ಎನ್‌ಸಿಪಿ ಪಕ್ಷದ ಸಚಿವ ಮಾಣಿಕರಾವ್‌ ಕೊಕಾಟೆ ಅವರಿಗೆ ನಾಸಿಕ್‌ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದ್ದರಿಂದ ಇವರ ಬಳಿ ಇದ್ದ ಖಾತೆಗಳನ್ನು ರಾಜ್ಯಪಾಲರು ಹಿಂಪಡೆದಿದ್ದು, ಈ ಖಾತೆಗಳನ್ನು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ನೀಡಿದ್ದಾರೆ.

ADVERTISEMENT

ಕೊಕಾಟೆ ಅವರಿಗೆ ನೀಡಲಾಗಿದ್ದ ಖಾತೆಗಳನ್ನು ಹಿಂಪಡೆದು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ನೀಡುವಂತೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ರಾಜ್ಯಪಾಲ ಆಚಾರ್ಯ ದೇವವ್ರತ ಅವರಿಗೆ ಪತ್ರ ಬರೆದಿದ್ದರು. ರಾಜ್ಯ ಸರ್ಕಾರದ ವಸತಿ ಯೋಜನೆವೊಂದರಲ್ಲಿ 1995ರಲ್ಲಿ ನಡೆಸಿದ ವಂಚನೆ ಪ್ರಕರಣದಲ್ಲಿ ಕೊಕಾಟೆ ಅವರಿಗೆ ಜೈಲು ಶಿಕ್ಷೆಯಾಗಿದೆ. ಕೊಕಾಟೆ ಅವರು ಸದ್ಯ ಖಾತೆರಹಿತ ಸಚಿವರಾಗಿ ಮುಂದುವರಿದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.