ಭೋಪಾಲ: ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ಸ್ವ ಇಚ್ಛೆಯಂತೆ ಆಸ್ತಿಯ ಸಮಪಾಲನ್ನು ಪತ್ನಿ ಹಾಗೂ ಸಾಕುನಾಯಿಗೆ ಉಯಿಲು ಬರೆದಿಡುವ ಮೂಲಕ ಗಮನ ಸೆಳೆದಿದ್ದಾರೆ.
ಮಧ್ಯ ಪ್ರದೇಶ ಚಿಂದ್ವಾರ ಚಿಲ್ಲೆಯ 50 ವರ್ಷದ ಓಂ ನಾರಾಯಣ್ ವರ್ಮಾ ಎಂಬವರೇ ತಮ್ಮ ಆಸ್ತಿಯ ಅರ್ಧ ಪಾಲನ್ನು ಸಾಕುನಾಯಿಯ ಹೆಸರಿನಲ್ಲಿ ಬರೆದಿಟ್ಟಿದ್ದಾರೆ.
ಬಡಿಬಾಬಾ ಗ್ರಾಮ ನಿವಾಸಿಯಾಗಿರುವ ಅವರಿಗೆ ನಾಲ್ಕು ಹೆಣ್ಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ. ಆದರೆ ತಮ್ಮ ಮಕ್ಕಳ ಹೆಸರಿನಲ್ಲಿ ಆಸ್ತಿ ಹಂಚುವ ಮನಸ್ಸು ಮಾಡಲಿಲ್ಲ.
ಉಯಿಲುನಲ್ಲಿ ಬರೆದಿಟ್ಟಿರುವ ದಾಖಲಾತಿಯ ಪ್ರಕಾರ, ಓಂ ನಾರಾಯಣ್ ವರ್ಮಾ 18 ಎಕರೆ ಜಮೀನನ್ನು ಹೊಂದಿದ್ದಾರೆ. ಅಲ್ಲದೆ ಪತ್ನಿ ಹಾಗೂ ಸಾಕುನಾಯಿಗೆ ಸಮಪಾಲು ಹಂಚಿದ್ದಾರೆ.
ಇಲ್ಲಿ ಆಸಕ್ತಿದಾಯಕ ಸಂಗತಿಯೆಂದರೆ ಶ್ವಾನದ ಮರಣದ ನಂತರ, ಈ ಸಾಕುಪ್ರಾಣಿಯನ್ನು ನೋಡಿಕೊಂಡವರಿಗೆ ಆಸ್ತಿಯ ಪಾಲು ಸೇರುತ್ತದೆ.
ನನ್ನ ಮಕ್ಕಳ ಮೇಲೆ ನನಗೆ ನಂಬಿಕೆಯಿಲ್ಲ, ಹಾಗಾಗಿ ನನ್ನ ಮರಣಾಂತರ ನನ್ನ ಪತ್ನಿ ಹಾಗೂ ಸಾಕುನಾಯಿ ಆಸ್ತಿಯ ಹಕ್ಕುದಾರರು ಎಂದು ಉಯಿಲು ಬರೆದಿಟ್ಟಿದ್ದೇನೆಎಂದು ಗ್ರಾಮದ ಮಾಜಿ ಸರಪಂಚ ಕೂಡಾ ಆಗಿರುವ ಓಂ ನಾರಾಯಣ್ ವರ್ಮಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.