ADVERTISEMENT

ಮಹಾರಾಷ್ಟ್ರ | ಕುಡಿಯಲು ಹಣ ಕೊಡದ್ದಕ್ಕೆ ‍ಪಕ್ಕದ ಮನೆಯ ಮಹಿಳೆಯನ್ನು ಕೊಂದ!

ಚಾಕುವಿನಿಂದ ಚುಚ್ಚಿ ಮಹಿಳೆಯ ಕೊಲೆ ಮಾಡಿದ ವ್ಯಕ್ತಿ

Published 15 ಡಿಸೆಂಬರ್ 2022, 5:32 IST
Last Updated 15 ಡಿಸೆಂಬರ್ 2022, 5:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಥಾಣೆ: ಕುಡಿಯಲು ಹಣ ನೀಡಿಲ್ಲವೆಂದು ವ್ಯಕ್ತಿಯೊಬ್ಬ, ನೆರೆ ಮನೆಯ ಮಹಿಳೆಯನ್ನೇ ಕೊಂದ ವಿಕ್ಷಿಪ್ತ ಘಟನೆ ಮಹಾರಾಷ್ಟ್ರದ ಥಾಣೆಯ ಡೋಂಬಿವಿಲಿ ಪ್ರದೇಶದಲ್ಲಿ ನಡೆದಿದೆ.

ಘಟನೆ ಸಂಬಂಧ ಕೊಲೆ ಆರೋಪಿ ವೈಶಾಲಿ ಮಸ್ದೂದ್‌ ಎಂಬಾತನನ್ನು ಬಂಧಿಸಲಾಗಿದೆ.

ಮದ್ಯ ಕುಡಿಯಲು ಹಣ ನೀಡಲು ನಿರಾಕರಿಸಿದ್ದಕ್ಕಾಗಿ ಈತ, ನೆರೆ ಮನೆಯ 44 ವರ್ಷದ ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮದ್ಯಪಾನ ಮಾಡುವುದಕ್ಕಾಗಿ ಮಸ್ದೂದ್‌, ಮಹಿಳೆ ಹಾಗೂ ಅವರ ಮಗನಿಂದ ಆಗಾಗ್ಗೆ ಹಣ ಪಡೆದುಕೊಳ್ಳುತ್ತಿದ್ದ. ಬುಧವಾರ ಮತ್ತೆ ಎಂದಿನಂತೆ ಹಣಕ್ಕೆ ಬೇಡಿಕೆ ಇಟ್ಟಾಗ, ಮಹಿಳೆ ಹಣ ನೀಡಲು ನಿರಾಕರಿಸಿದ್ದಾರೆ.

ಇದರಿಂದ ಕೋಪಗೊಂಡ ಮಸೂದ್‌, ಚಾಕುವಿನಿಂದ ಹಲವು ಬಾರಿ ಚುಚ್ಚಿ ಮಹಿಳೆಯನ್ನು ಕೊಲೆ ಮಾಡಿದ್ದಾರೆ.

ಸದ್ಯ ಆರೋಪಿಯ ಬಂಧನವಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.