ADVERTISEMENT

ದೆಹಲಿ: ಗುಟ್ಕಾ ಉಗುಳಿದ್ದವನ ಮೇಲೆ ನೆರೆಮನೆಯವನಿಂದ ಗುಂಡೇಟು!

ಪಿಟಿಐ
Published 25 ಮೇ 2025, 14:24 IST
Last Updated 25 ಮೇ 2025, 14:24 IST
ಗುಟ್ಕಾ
ಗುಟ್ಕಾ   

ನವದೆಹಲಿ: ಗುಟ್ಕಾ ಉಗುಳಿದ್ದಕ್ಕೆ ಕೋಪಗೊಂಡ ನೆರೆ ಮನೆಯವರು ಜಗಳಕ್ಕಿಳಿದು 35 ವರ್ಷದ ವ್ಯಕ್ತಿ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಈಶಾನ್ಯ ದೆಹಲಿಯ ಖಜೂರಿ ಖಾಸ್ ಪ್ರದೇಶದಲ್ಲಿ ನಡೆದಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.

ಅಮೀರ್‌ ಗಾಯಗೊಂಡ ವ್ಯಕ್ತಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ರಾತ್ರಿ ಗುಟ್ಕಾ ಉಗುಳಿದರೆಂದು ಅಮೀರ್‌ ಜತೆ ಪಕ್ಕದ ಮನೆಯ 20 ವರ್ಷದ ಅಮನ್, ಅವರ ತಂದೆ ಇರ್ಫಾನ್ ಮತ್ತು ರೆಹಾನ್‌ ಜಗಳ ತೆಗೆದಿದ್ದರು. ಜಗಳ ವಿಕೋಪಕ್ಕೆ ತಿರುಗಿ ದೇಸಿ ನಿರ್ಮಿತ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ. ಅಮನ್‌ ಎಂಬಾತನನ್ನು ಬಂಧಿಸಲಾಗಿದ್ದು, ಇಬ್ಬರಿಗೆ ಶೋಧ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.