ಮಥುರಾ(ಉತ್ತರಪ್ರದೇಶ): ಕೊರೊನಾ ಸೋಂಕಿನಿಂದ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ಇಲ್ಲಿನ ಯಮುನಾ ನದಿ ನೀರು ಪರಿಶುದ್ಧವಾಗಿದೆ.
ಕೈಗಾರಿಕೆಗಳು ಮುಚ್ಚಿರುವುದರಿಂದ ಮಲಿನ ನೀರು ನದಿಗೆ ಸೇರುವುದು ನಿಂತಿದ್ದು ಇದರಿಂದಾಗಿ ನೀರು ಪರಿಶುದ್ಧವಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಲಾಕ್ ಡೌನ್ ನಿಂದಾಗಿ ಪರಿಸರ ಮಾಲಿನ್ಯ ತಪ್ಪಿದ್ದು, ಯಾವುದೇ ಮಲಿನ ನೀರು ನದಿ ಸೇರುತ್ತಿಲ್ಲ. ಗಂಗಾ ನದಿಯಲ್ಲಿಯೂ ಇದೇ ರೀತಿ ಮಲಿನ ನೀರು ಕಡಿಮೆಯಾಗಿರುವುದರಿಂದಶೇ.50ರಷ್ಟು ಮಲಿನ ನೀರು ಕಡಿಮೆಯಾಗಿ ಪರಿಶುದ್ಧವಾಗಿದೆ ಎಂದು ವರದಿಗಳು ತಿಳಿಸಿವೆ.
ಈಗ ಲಾಕ್ಡೌನ್ ದೇಶದೆಲ್ಲೆಡೆ ಜಾರಿಯಲ್ಲಿದ್ದು ಪರಿಸರ ಮಾಲಿನ್ಯ ಕಡಿಮೆಯಾದ ಕಾರಣ ಯಮುನಾನದಿಯಲ್ಲಿ ನೀರು ಪರಿಶುದ್ಧವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.