ADVERTISEMENT

ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್‌ ಸೇರ್ಪಡೆಗೆ ಮೊಯಿಲಿ ಬೆಂಬಲ

ಕೆಲ ಮುಖಂಡರಿಂದ ‘ಜಿ–23’ ದುರ್ಬಳಕೆ: ಅಸಮಾಧಾನ

ಪಿಟಿಐ
Published 12 ಸೆಪ್ಟೆಂಬರ್ 2021, 14:50 IST
Last Updated 12 ಸೆಪ್ಟೆಂಬರ್ 2021, 14:50 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ    

ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ನ ಹಿರಿಯ ಮುಖಂಡ ವೀರಪ್ಪ ಮೊಯಿಲಿ ಭಾನುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಸಂಘಟನೆಯಲ್ಲಿ ಸುಧಾರಣೆ ತರುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹೀಗಾಗಿ ಪ್ರಶಾಂತ್‌ ಕಿಶೋರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸುವವರು ಸುಧಾರಣಾ ವಿರೋಧಿಗಳು’ ಎಂದು ಮೊಯಿಲಿ ಪ್ರತಿಪಾದಿಸಿದರು.

ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸಂಘಟನೆಯ ಸಮಗ್ರ ಸುಧಾರಣೆಗಾಗಿ ಕಳೆದ ವರ್ಷ 23 ಜನ ಮುಖಂಡರು (ಜಿ–23) ಸೋನಿಯಾ ಗಾಂಧಿ ಅವರಿಗೆ ಬರೆದಿದ್ದೆವು. ಪಕ್ಷವನ್ನು ಬೇರು ಮಟ್ಟದಿಂದ ಬಲಪಡಿಸುವ ಹಾಗೂ ಸುಧಾರಣೆ ತರುವ ಏಕೈಕ ಉದ್ದೇಶದೊಂದಿಗೆ ನನ್ನನ್ನೂ ಸೇರಿದಂತೆ ಕೆಲ ಮುಖಂಡರು ಈ ಪತ್ರಕ್ಕೆ ಸಹಿ ಹಾಕಿದ್ದೆವು ಹೊರತು ಪಕ್ಷವನ್ನು ನಾಶ ಮಾಡುವ ಉದ್ದೇಶವಿರಲಿಲ್ಲ’ ಎಂದು ಹೇಳಿದ್ದಾರೆ.

‘ಅದಾಗಲೇ, ಪಕ್ಷದಲ್ಲಿ ಸುಧಾರಣೆ ತರಲು ಸೋನಿಯಾ ಗಾಂಧಿಯವರು ಚಿಂತನೆ ನಡೆಸಿದ್ದರು. ಆದರೆ, ಕೆಲವು ಮುಖಂಡರು ಈ ರೀತಿ ಪತ್ರ ಬರೆದಿದ್ದನ್ನು ದುರುಪಯೋಗಪಡಿಸಿಕೊಂಡರು. ಈ ರೀತಿ ಧ್ವನಿ ಎತ್ತುವುದಕ್ಕೆ ಸಾಂಸ್ಥಿಕ ರೂಪ ನೀಡಿದ್ದೇ ಆದರೆ ಅದು ಪಟ್ಟಭದ್ರ ಹಿತಾಸಕ್ತಿಗಳನ್ನು ಬೆಂಬಲಿಸಿದಂತಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.