ADVERTISEMENT

ಪತ್ರಕರ್ತ ಗೋಸ್ವಾಮಿ ವಿರುದ್ಧದ ಟಿಆರ್‌ಪಿ ಪ್ರಕರಣ ಹಿಂಪಡೆಯಲು ಪೊಲೀಸರ ಅರ್ಜಿ

ಪಿಟಿಐ
Published 28 ನವೆಂಬರ್ 2023, 16:04 IST
Last Updated 28 ನವೆಂಬರ್ 2023, 16:04 IST
ಅರ್ನಬ್‌ ಗೋಸ್ವಾಮಿ
ಅರ್ನಬ್‌ ಗೋಸ್ವಾಮಿ   

ಮುಂಬೈ: ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ವಿರುದ್ಧದ ನಕಲಿ ಟಿಆರ್‌ಪಿ ಪ್ರಕರಣವನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ. 

ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಡಿ.28ರಂದು ನಡೆಸಲಿದೆ.

ನಕಲಿ ಟಿಆರ್‌ಪಿ ಹಗರಣವು 2020ರ ಅಕ್ಟೋಬರ್‌ನಲ್ಲಿ ಬೆಳಕಿಗೆ ಬಂದಿತ್ತು. ಕೆಲವು ಚಾನೆಲ್‌ಗಳು ಟಿಆರ್‌ಪಿ ಮಾಹಿತಿಯನ್ನು ತಿರುಚಿವೆ ಎಂದು ಆರೋಪಿಸಿದ್ದ ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ (ಬಿಎಆರ್‌ಸಿ), ಹನ್ಸ ರಿಸರ್ಚ್‌ ಗ್ರೂಪ್ (ಎಚ್‌ಆರ್‌ಜಿ) ಮೂಲಕ ದೂರು ಸಲ್ಲಿಸಿತ್ತು.

ADVERTISEMENT

ಈ ದೂರಿನ ಆಧಾರದಲ್ಲಿ ಪೂರಕ ಆರೋಪ‍ಪಟ್ಟಿಯಲ್ಲಿ ಪೊಲೀಸರು ಗೋಸ್ವಾಮಿ ಹಾಗೂ ಬಿಎಆರ್‌ಸಿಯ ಮಾಜಿ ಸಿಇಒ ಪಾರ್ಥೊ ದಾಸಗುಪ್ತ ಅವರನ್ನು ಆರೋಪಿಗಳಾಗಿ ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.