ADVERTISEMENT

ಮುಂಬೈಯಲ್ಲಿ ಮಹಾಮಳೆ: ವಿದ್ಯುತ್ ಆಘಾತದಿಂದ ಮೂರು ಬಲಿ 

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 13:01 IST
Last Updated 28 ಜೂನ್ 2019, 13:01 IST
   

ಮುಂಬೈ: ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು ವಿದ್ಯುತ್ ಆಘಾತದಿಂದ ಮೂರು ಮಂದಿ ಸಾವಿಗೀಡಾಗಿದ್ದಾರೆ.

ಅಂಧೇರಿ( ಪೂರ್ವ)ಯಲ್ಲಿ 60 ವರ್ಷದ ಮಹಿಳೆ ಮತ್ತು ಗುರುಗಾಂವ್ (ಪೂರ್ವ)ದಲ್ಲಿ ಇಬ್ಬರು ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ.

ರಸ್ತೆಗಳು ಜಲಾವೃತವಾಗಿರುವುದರಿಂದ ಬೆಸ್ಟ್ ಬಸ್‌ಗಳು ಬೇರೆ ದಾರಿಯಾಗಿ ಸಂಚರಿಸುತ್ತಿವೆ. ಮಜ್‌ಗಾಂವ್, ಸಾಕಿನಾಕ, ಕುರ್ಲಾ (ಪೂರ್ವ) ಮತ್ತು ಘಾಟ್ಕೋಪರ್ ಮೊದಲಾದ ಪ್ರದೇಶಗಳು ಜಲಾವೃತವಾಗಿವೆ.ನೀರಿನಿಂದಾವೃತವಾಗಿರುವ ಅಂಧೇರಿ ಸಬ್‌ವೇಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ADVERTISEMENT

ಶುಕ್ರವಾರ ಬೆಳಗ್ಗಿನಿಂದ ಇಲ್ಲಿ ಮಳೆ ಸುರಿಯುತ್ತಿದ್ದು, ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಸಂಚಾರಕ್ಕೆ ತಡೆಯುಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.