ನವದೆಹಲಿ: ಒಳಚರಂಡಿ ನೀರು ನದಿಗಳಿಗೆ ಸೇರುವ ಮುನ್ನ ಸಂಪೂರ್ಣವಾಗಿ ಸಂಸ್ಕರಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ಜಿಟಿ) ಹೇಳಿದೆ. ಮುಂದಿನ ಮಾರ್ಚ್ 31ರೊಳಗೆ ಇದು ಜಾರಿಗೆ ಬರಬೇಕು. ತಪ್ಪಿದರೆ, ಸಂಬಂಧಪಟ್ಟಇಲಾಖೆಯು ಒಂದು ಚರಂಡಿಗೆತಿಂಗಳಿಗೆ ₹5 ಲಕ್ಷ ದಂಡ ಪಾವತಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ನೇತೃತ್ವದ ಪೀಠವು ನೀಡಿದೆ.
ಹೆದ್ದಾರಿ ಬದಿ ಹಸಿರು:ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಹಸಿರು ವಲಯ ನಿರ್ವಹಣೆಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದೂ ಹಸಿರು ಪೀಠ ಆದೇಶ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.