ನವದೆಹಲಿ: ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಪರಿಸರ ಹಿತರಕ್ಷಣೆಯ ವಿಷಯವಾಗಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಹೊಂದಿದೆ’ಎಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿದೆ.
‘ಸಾರ್ವಜನಿಕರ ದೂರು ಹಾಗೂ ಮಾಧ್ಯಮಗಳ ವರದಿಗಳ ಆಧಾರದ ಮೇಲೆ ಎನ್ಜಿಟಿ ಪರಿಸರ ಸಂಬಂಧಿ ವಿಷಯಗಳ ಮೇಲೆ ತನ್ನದೇ ವಿಚಾರಣೆ ಮಾಡಬಹುದು’ಎಂದುನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ಪೀಠಈ ತೀರ್ಪು ನೀಡಿದೆ.
‘ಎನ್ಜಿಟಿಗೆ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಇಲ್ಲ. ಸಂವಿಧಾನಿಕ ಪೀಠಗಳಿಗೆ ಮಾತ್ರ ಈ ಅಧಿಕಾರ ಇದೆ’ಎಂದು ಎನ್ಜಿಟಿ ವಿರುದ್ಧಕೇಂದ್ರ ಸರ್ಕಾರ ಧಾವೆ ಹೂಡಿತ್ತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ‘ಎನ್ಜಿಟಿಗೆ ಒಂದು ವಿಷಯವನ್ನು ಸ್ವಂತಂತ್ರವಾಗಿಗ್ರಹಿಸುವ ಅಧಿಕಾರವಿಲ್ಲ. ನ್ಯಾಯಾಧೀಕರಣದ ಅಧಿಕಾರಗಳು ನಿರ್ಬಂಧಗಳಿಂದ ಮುಕ್ತವಾಗಿರುವುದಿಲ್ಲ.ಇದು ಪರಿಸರ ವಿಷಯಗಳ ಬಗ್ಗೆ ವ್ಯವಹರಿಸುವ ಒಂದು ನ್ಯಾಯಪೀಠವಾಗಿದೆ.ಪರಿಸರವು ಯಾರೋ ಒಬ್ಬರಿಗೆ ಸಂಬಂಧಿಸಿಲ್ಲ" ಎಂದು ವಾದಿಸಿದ್ದರು.
ಆದರೆ, ಕೇಂದ್ರದ ವಾದವನ್ನು ಮಾನ್ಯ ಮಾಡದ ನ್ಯಾಯಾಲಯ ಎನ್ಜಿಟಿಗೆ ಸು–ಮೋಟೊ ಕೇಸ್ ದಾಖಲಿಸಿಕೊಳ್ಳುವ ಅಧಿಕಾರ ಇದೆ ಎಂದು ಹೇಳಿದೆ. ಎನ್ಜಿಟಿ ಪರವಾಗಿ ಹಿರಿಯ ವಕೀಲ ಸಂಜಯ್ ಪಾರೇಖ್ ವಾದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.