ADVERTISEMENT

ಶ್ರೀನಗರದಲ್ಲಿ ಶಂಕಿತ ಇಸ್ಲಾಮಿಕ್ ಸ್ಟೇಟ್ ಸದಸ್ಯನ ಮನೆ ಮೇಲೆ ಎನ್‌ಐಎ ದಾಳಿ

ಪಿಟಿಐ
Published 13 ಮಾರ್ಚ್ 2023, 14:13 IST
Last Updated 13 ಮಾರ್ಚ್ 2023, 14:13 IST
   

ನವದೆಹಲಿ: ಇಸ್ಲಾಮಿಕ್‌ ಸ್ಟೇಟ್‌ ಉಗ್ರಗಾಮಿ ಸಂಘಟನೆ ಜತೆ ಕೇರಳದ ಕೆಲವು ವ್ಯಕ್ತಿಗಳಿಗೆ ನಂಟು ಹೊಂದಿರುವುದಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ಶ್ರೀನಗರದಲ್ಲಿ ಶಂಕಿತ ಉಗ್ರ ಸಂಘಟನೆಯ ಸದಸ್ಯನ ಮನೆ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ದಾಳಿ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಂಕಿತ ಉಜೈರ್ ಅಜರ್ ಭಟ್ ಮನೆಯಲ್ಲಿ ಶೋಧ ನಡೆಸಿರುವ ಎನ್‌ಐಎ, ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿದೆ.

ಮನೆಯಿಂದ ವಶಪಡಿಸಿದ ಡಿಜಿಟಲ್ ಉಪಕರಣಗಳ ಪರಿಶೀಲನೆ ಮುಂದುವರಿದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ADVERTISEMENT

2021ರಲ್ಲಿ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಚಾನೆಲ್ ನಿರ್ವಹಿಸುತ್ತಿದ್ದ ಕೇರಳದ ಕಡನ್ನಮನ್ನದ ಮೊಹಮ್ಮದ್ ಅಮೀನ್‌ಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಎಎನ್‌ಐ ಪ್ರಾರಂಭಿಸಿತು.

ಐಸಿಸ್ ಸಿದ್ಧಾಂತದ ಪ್ರಚಾರ ನಡೆಸುವುದು, ಜನರನ್ನು ಭಯೋತ್ಪಾದಕ ಗುಂಪಿಗೆ ಸೇರಿಸುವುದು ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.