ADVERTISEMENT

ಮೊಂಬತ್ತಿ ಉರಿಸುವುದಕ್ಕೂ ಕೊರೊನಾ ನಾಶಕ್ಕೂ ಸಂಬಂಧವೇ ಇಲ್ಲ: ಕಾಂಗ್ರೆಸ್

ಏಜೆನ್ಸೀಸ್
Published 3 ಏಪ್ರಿಲ್ 2020, 11:51 IST
Last Updated 3 ಏಪ್ರಿಲ್ 2020, 11:51 IST
ಕಾಂಗ್ರೆಸ್ ಮುಖಂಡ ಎ.ಆರ್.ಚೌದರಿ
ಕಾಂಗ್ರೆಸ್ ಮುಖಂಡ ಎ.ಆರ್.ಚೌದರಿ   

ನವದೆಹಲಿ: ಮೂಂಬತ್ತಿ ಉರಿಸಿ, ಲೈಟ್ ಆಫ್ ಮಾಡುವುದಕ್ಕೂ ಕೊರೊನಾ ವಿರುದ್ಧ ಹೋರಾಟ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ನಾನು ಮೂಂಬತ್ತಿ ಉರಿಸುವುದೂ ಇಲ್ಲ. ಲೈಟ್ ಆಫ್ ಮಾಡುವುದೂ ಇಲ್ಲ ಎಂದುಕಾಂಗ್ರೆಸ್ ಹೇಳಿದೆ.

ಈ ಸಂಬಂಧ ಕಾಂಗ್ರೆಸ್ ಮುಖಂಡಎ.ಆರ್.ಚೌದರಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಅಂದು ಲೈಟ್ ಆಫ್ ಮಾಡುವುದೂ ಇಲ್ಲ, ಮೊಂಬತ್ತಿ ಉರಿಸುವುದೂ ಇಲ್ಲ. ಇದರಿಂದ ನನ್ನನ್ನು ರಾಷ್ಟ್ರವಿರೋಧಿ ಅಂತ ಕರೆಯಬಹುದು. ಆ ರೀತಿ ಕರೆಸಿಕೊಳ್ಳುವುದಕ್ಕೂ ನಾನು ಸಿದ್ಧ ಎಂದು ಅವರು ಹೇಳಿದ್ದಾರೆ.

ಆದರೆ, ಕಾಂಗ್ರೆಸ್ಕೊರೊನಾ ವಿರುದ್ಧ ಹೋರಾಟ ಮುಂದುವರಿಸುತ್ತದೆ ಎಂದಿದ್ದಾರೆ. ಏಪ್ರಿಲ್ 5ರಂದು ಭಾನುವಾರ ರಾತ್ರಿ 9 ನಿಮಿಷಗಳ ಕಾಲ ಲೈಟ್ ಆಫ್ ಮಾಡಿ ಮೊಂಬತ್ತಿ, ಮೊಬೈಲ್ ಟಾರ್ಚ್ ಅಥವಾ ಇತರೆ ದೀಪಗಳನ್ನು ಬೆಳಗಿಸುವ ಮೂಲಕ ಕೊರೊನಾ ವಿರುದ್ದ ಹೋರಾಟದ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಪ್ರಧಾನಿ ಮೋದಿ ಶುಕ್ರವಾರ ಬೆಳಿಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.