ADVERTISEMENT

ಬಿಹಾರ ಚುನಾವಣೆ: ಎನ್‌ಡಿಎಯಲ್ಲಿ ಒಡಕಿಲ್ಲ ಎಂದ ಸಚಿವ ನಿತ್ಯಾನಂದ ರೈ

ಏಜೆನ್ಸೀಸ್
Published 5 ಜುಲೈ 2020, 11:24 IST
Last Updated 5 ಜುಲೈ 2020, 11:24 IST
ನಿತ್ಯಾನಂದ ರೈ -ಎಎನ್‌ಐ ಚಿತ್ರ
ನಿತ್ಯಾನಂದ ರೈ -ಎಎನ್‌ಐ ಚಿತ್ರ   

ನವದೆಹಲಿ: ಎನ್‌ಡಿಎ ಮಿತ್ರ ಪಕ್ಷಗಳಲ್ಲಿ ಯಾವುದೇ ಒಡಕಿಲ್ಲ. ಬಿಹಾರ ವಿಧಾನಸಭೆ ಚುನಾವಣೆಯನ್ನು ಜತೆಯಾಗಿ ಎದುರಿಸುತ್ತೇವೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.

ಬಿಹಾರದ ಪುರ್ನಿಯಾದ ಚುನಾವಣಾ ಪ್ರಚಾರ ವರ್ಚುವಲ್ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆ ಪಕ್ಷಗಳು ಎನ್‌ಡಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವದಂತಿ ಹರಡುತ್ತಿವೆ ಎಂದೂ ದೂರಿದ್ದಾರೆ.

ರಾಜ್ಯಸಭೆಯ ಕಾಂಗ್ರೆಸ್ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ಅವರು ಈಚೆಗೆ ರಾಮ್ ವಿಲಾಸ್ ಪಾಸ್ವಾನ್ ನಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದು ರಾಹುಲ್ ಗಾಂಧಿ ಬಳಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡುವಾಗ ಹೇಳಿದ್ದರು. ಇದಾದ ಬಳಿಕ, ಎನ್‌ಡಿಎ ಮೈತ್ರಿಕೂಟದಿಂದ ಎಲ್‌ಜೆಪಿ ಹೊರಬರಲಿದೆ ಎಂಬ ವದಂತಿ ಹರಡಿತ್ತು.

ADVERTISEMENT

‘ಆರ್‌ಜೆಡಿ ಮತ್ತು ಕಾಂಗ್ರೆಸ್ ನಾಯಕರು ಊಹಾಪೋಹಗಳನ್ನು ಹರಡುವ ಬದಲು ಅವರ ಮೈತ್ರಿಕೂಟ ಬಗ್ಗೆ ಚಿಂತಿಸಲಿ. ಎನ್‌ಡಿಎಯಲ್ಲಿ ಒಡಕಿಲ್ಲ. ಜತೆಯಾಗಿ ವಿಧಾನಸಭೆ ಚುನಾವಣೆ ಎದುರಿಸಿ 2010ರ ಚುನಾವಣೆಯಲ್ಲಿ ನೀಡಿದ್ದ ಪ್ರದರ್ಶನವನ್ನೇ ನೀಡಲಿದ್ದೇವೆ’ ಎಂದು ರೈ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.