ADVERTISEMENT

ಸಮಸ್ಯೆ ಕಡೆಗಣಿಸುವ ಸರ್ಕಾರಿ ಅಧಿಕಾರಿಗಳಿಗೆ ಕೋಲಿನಿಂದ ಹೊಡೆಯಿರಿ: ಕೇಂದ್ರ ಸಚಿವ

ಪಿಟಿಐ
Published 7 ಮಾರ್ಚ್ 2021, 6:56 IST
Last Updated 7 ಮಾರ್ಚ್ 2021, 6:56 IST
ಗಿರಿರಾಜ್‌ ಸಿಂಗ್‌  –ಪಿಟಿಐ ಚಿತ್ರ
ಗಿರಿರಾಜ್‌ ಸಿಂಗ್‌  –ಪಿಟಿಐ ಚಿತ್ರ   

ಬೆಗುಸರಾಯ್: ‘ನಿಮ್ಮ ಸಮಸ್ಯೆಗಳನ್ನು ಕಡೆಗಣಿಸುವ ಸರ್ಕಾರಿ ಅಧಿಕಾರಿಗಳನ್ನು ಬಿದಿರಿನ ಕೋಲುಗಳಿಂದ ಹೊಡೆಯಿರಿ’ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದ್ದಾರೆ.

ಬಿಹಾರದ ಖೋಡಬಂದಪುರದಲ್ಲಿ ಕೃಷಿ ಸಂಸ್ಥೆಯೊಂದು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಧಿಕಾರಿಗಳು ತಮ್ಮ ಸಮಸ್ಯೆಗಳಿಗೆ ಗಮನ ಕೊಡುತ್ತಿಲ್ಲ ಎಂಬ ಹಲವು ದೂರುಗಳು ಬರುತ್ತಿವೆ. ನಾಗರಿಕರ ಸೇವೆ ಮಾಡುವುದು ಸಂಸದರು, ಶಾಸಕರು, ಗ್ರಾಮದ ಮುಖ್ಯಸ್ಥರ, ಡಿಎಂ, ಎಸ್‌ಡಿಎಂ, ಬಿಡಿಒಗಳು ಕರ್ತವ್ಯ. ಅವರು ನಿಮ್ಮ ಸಮಸ್ಯೆಗಳನ್ನು ನಿರ್ಲಕ್ಷ್ಯಿಸಿದರೆ ಅವರಿಗೆ ಬಿದಿರಿನ ಕೋಲುಗಳಿಂದ ಹೊಡೆಯಿರಿ’ ಎಂದರು.

‘ಈ ಬಳಿಕವೂ ನಿಮ್ಮ ಸಮಸ್ಯೆ ನಿವಾರಣೆ ಆಗದಿದ್ದಲ್ಲಿ, ನಿಮ್ಮ ಸಹಾಯಕ್ಕೆ ನಾನು ಇದ್ದೇನೆ’ ಎಂದು ಅವರು ತಿಳಿಸಿದರು.

ADVERTISEMENT

ಗಿರಿರಾಜ್‌ ಸಿಂಗ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರೊಬ್ಬರು,‘ ಗಿರಿರಾಜ್‌ ಅವರು ಜನ ನಾಯಕ. ಅವರು ಸಾರ್ವಜನಿಕರ ಆಕ್ರೋಶಕ್ಕೆ ಉತ್ತರಿಸಬೇಕಾಗುತ್ತದೆ. ಅವರ ಹೇಳಿಕೆಯನ್ನು ನಾವು ಸಾಂಕೇತವಾಗಿ ಪರಿಗಣಿಸಬೇಕೇ ಹೊರತು ಅಕ್ಷರಶಃ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.