ಮುಂಬೈ:ಕೊರೊನಾ ಪಾಸಿಟಿವ್ ಇರುವ ವ್ಯಕ್ತಿಯ ಮನೆಗೆ ಮುದ್ರೆ ಹಾಕಲು ಮುಂದಾದ ಬೃಹತ್ ಮುಂಬೈ ನಗರಪಾಲಿಕೆ ತಂಡದ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಯನ್ನುಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಧಾರಾವಿ ಪ್ರದೇಶದಲ್ಲಿ ಬುಧವಾರಘಟನೆ ನಡೆದಿತ್ತು.ಪಾಲಿಕೆ ತಂಡದ ಸದಸ್ಯರನ್ನುಧಾರಾವಿಯ ಕೆಲ ವ್ಯಕ್ತಿಗಳು ಅಡ್ಡಗಟ್ಟಿದ್ದಲ್ಲದೆ, ಕೊರೊನಾ ಪಾಸಿಟಿವ್ ಹೊಂದಿದ ವ್ಯಕ್ತಿಯ ಮನೆಗೆ ಮುದ್ರೆ ಹಾಕದಂತೆತಡೆದಿದ್ದರು. ಈ ಸಮಯದಲ್ಲಿ ಅಧಿಕಾರಿಗಳು ತಮ್ಮ ಕೆಲಸ ಮುಂದುವರಿಸಲು ಅಡ್ಡಿಯಾಗಿದ್ದರು. ಕೂಡಲೆ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆದೂರು ನೀಡಿದ್ದರು.
ಇದನ್ನೂ ಓದಿ:
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರುವಾರ ಆರೋಪಿಗಳಲ್ಲಿಒಬ್ಬನನ್ನು ಬಂಧಿಸಿದ್ದಾರೆ. 7 ರಿಂದ 8 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದು ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.