ADVERTISEMENT

79th independnce day: ಮರಳು ಕಲಾಕೃತಿಯಲ್ಲಿ 'ಆಪರೇಷನ್‌ ಸಿಂಧೂರ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2025, 2:48 IST
Last Updated 15 ಆಗಸ್ಟ್ 2025, 2:48 IST
   

ಭುವನೇಶ್ವರ: ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದ ಸುದರ್ಶನ್ ಪಟ್ನಾಯಕ್, 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿತ ಮರಳು ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸುದರ್ಶನ್‌, ಸ್ವಾತಂತ್ರ್ಯದಿನದ ಸಂದರ್ಭದಲ್ಲಿ ಆಪರೇಷನ್‌ ಸಿಂಧೂರ ಕಲಾಕೃತಿಯು ಕಾರ್ಯಾಚರಣೆ ವೇಳೆ ಸಶಸ್ತ್ರ ಪಡೆಗಳು ತೋರಿದ ದಿಟ್ಟ ಹೋರಾಟವನ್ನು ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಮೂಲಕ ಪ್ರಗತಿಪರ, ಸಬಲೀಕರಣ ಮತ್ತು ಏಕೀಕೃತ ಭಾರತದ ಚೈತನ್ಯದ ಪ್ರತೀಕವಾಗಿದೆ ಈ ಕಲಾಕೃತಿ ಎಂದೂ ಸುದರ್ಶನ್‌ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಪುರಿ ಕಡಲತೀರದ ಬಳಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಮರಳು ಕಲಾಕೃತಿ ಮೂಡಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.