ADVERTISEMENT

ತಮಿಳುನಾಡು ಸಚಿವ ಪಿ.ಬಾಲಕೃಷ್ಣ ರೆಡ್ಡಿ ರಾಜೀನಾಮೆ

ಪಿಟಿಐ
Published 7 ಜನವರಿ 2019, 18:52 IST
Last Updated 7 ಜನವರಿ 2019, 18:52 IST
ಬಾಲಕೃಷ್ಣ ರೆಡ್ಡಿ
ಬಾಲಕೃಷ್ಣ ರೆಡ್ಡಿ   

ಚೆನ್ನೈ : ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವತಮಿಳುನಾಡು ಸರ್ಕಾರದ ಕ್ರೀಡಾ ಸಚಿವ ಪಿ.ಬಾಲಕೃಷ್ಣ ರೆಡ್ಡಿ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ.

ಅಕ್ರಮ ಮದ್ಯಸೇವನೆ ಸಂಬಂಧ 1998ರಲ್ಲಿ ಹೊಸೂರಿನಲ್ಲಿ ನಡೆದ ಗಲಭೆ ಪ್ರಕರಣದಲ್ಲಿಇಲ್ಲಿನ ವಿಶೇಷ ಕೋರ್ಟ್ ಸಚಿವರಿಗೆ ಶಿಕ್ಷೆ ವಿಧಿಸಿದೆ. ಕೋರ್ಟ್ ತೀರ್ಪು ಪ್ರಕಟವಾದ ಬಳಿಕ ಅವರು ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT