ಪೂಂಚ್(ಜಮ್ಮು ಕಾಶ್ಮೀರ): ಇಲ್ಲಿನ ಕೃಷ್ಣ ಘಾಟಿ ಪ್ರದೇಶದ ಬಳಿಯಿರುವ ಗಡಿ ನಿಯಂತ್ರಣ ರೇಖೆಯ ಬಳಿ ಗುರುವಾರ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿ ನಡೆಸಿರುವ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದೆ.
ಭಾರತ ಭದ್ರತಾ ಪಡೆಗಳು ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದೆ. ಗುರುವಾರ ಬೆಳಿಗ್ಗೆ ಆರು ಗಂಟೆ ವೇಳೆಗೆ ಆರಂಭವಾದ ಗುಂಡಿನ ಚಕಮಕಿ ಸುಮಾರು ಒಂದು ಗಂಟೆಯ ಬಳಿಕ ನಿಂತಿದೆ.
ರಾಜೌರಿ ಜಿಲ್ಲೆಯ ಕೃಷ್ಣ ಘಾಟಿ ಹಾಗೂ ಮೆಂಢರ್ ಪ್ರದೇಶಗಳ ಬಳಿ ಪಾಕಿಸ್ತಾನ ಪಡೆಗಳು ಬುಧವಾರವೂ ಗುಂಡಿನ ದಾಳಿ ನಡೆಸಿದ್ದವು. ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದಲ್ಲಿರುವ ಕಮಲಾಕೋಟ್ ಎಂಬಲ್ಲಿಯೂ ಮತ್ತೊಂದು ದಾಳಿ ಪ್ರಕರಣ ವರದಿಯಾಗಿತ್ತು. ಈ ಎಲ್ಲ ದಾಳಿಗಳನ್ನು ಭಾರತ ಪಡೆಗಳು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.