ADVERTISEMENT

ದೀಪಾವಳಿ: ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ

ಪಿಟಿಐ
Published 21 ಅಕ್ಟೋಬರ್ 2025, 13:51 IST
Last Updated 21 ಅಕ್ಟೋಬರ್ 2025, 13:51 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ನವದೆಹಲಿ: ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶದ ನಾಗರಿಕರಿಗೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಅವರು ದೇಶದ ನಾಗರಿಕರನ್ನು ಉದ್ದೇಶಿಸಿ ಮಂಗಳವಾರ ಪತ್ರ ಬರೆದಿದ್ದಾರೆ. 

‘ಇದು ಶಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸುವ ಹಬ್ಬ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ನಡೆಯುತ್ತಿರುವ ಎರಡನೇ ದೀಪಾವಳಿ’ ಎಂದು ಉಲ್ಲೇಖಿಸಿರುವ ಅವರು, ಹಲವು ಸಾಧನೆಗಳ ಬಗ್ಗೆ ಪಟ್ಟಿ ಮಾಡಿ ಹೇಳಿದ್ದಾರೆ.

ADVERTISEMENT

ಪತ್ರದಲ್ಲಿರುವ ಪ್ರಮುಖಾಂಶಗಳು

* ಇಡೀ ಜಗತ್ತು ವಿವಿಧ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತ ಸ್ಥಿರತೆ ಸಾಧಿಸಿದೆ. ಈ ಮೂಲಕ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗುವ ಹಾದಿಯಲ್ಲಿ ಸಾಗುತ್ತಿದೆ

* ಭಾರತವು ‘ಆಪರೇಷನ್‌ ಸಿಂಧೂರ್‌’ನಲ್ಲಿ ಯಶಸ್ಸು ಕಂಡಿದೆ. ಅಂತೆಯೇ ನಕ್ಸಲರ ವಿರುದ್ಧದ ಹೋರಾಟದಲ್ಲೂ ಯಶಸ್ಸು ದೊರೆತಿದೆ

* ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಕಡಿಮೆಗೊಳಿಸಿದ್ದು, ಸರ್ಕಾರದ ಐತಿಹಾಸಿಕ ಸಾಧನೆ. ‘ಜಿಎಸ್‌ಟಿ ಬಚತ್‌ ಉತ್ಸವ’ದಿಂದ ನಾಗರಿಕರು ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸುತ್ತಿದ್ದಾರೆ 

* ‘ಏಕ್‌ ಭಾರತ್‌, ಶ್ರೇಷ್ಠ ಭಾರತ್‌’ ಮನೋಭಾವವನ್ನು ಉತ್ತೇಜಿಸಿ, ಎಲ್ಲ ಭಾಷೆಗಳನ್ನೂ ಗೌರವಿಸಿ, ಆರೋಗ್ಯಕ್ಕೆ ಆದ್ಯತೆ ನೀಡಿ, ಯೋಗವನ್ನು ಅಳವಡಿಸಿಕೊಳ್ಳಿ, ಸ್ವದೇಶಿ ಬಳಕೆಗೆ ಒತ್ತು ನೀಡಿ. ಈ ಪ್ರಯತ್ನಗಳು ವಿಕಸಿತ ಭಾರತಕ್ಕೆ ನೆರವಾಗುತ್ತವೆ

* ಶ್ರೀರಾಮ ನಮಗೆ ನೀತಿಯನ್ನು ಎತ್ತಿಹಿಡಿಯಲು ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಧೈರ್ಯ ನೀಡುತ್ತಾನೆ. ಕೆಲ ತಿಂಗಳ ಹಿಂದೆ ‘ಆಪರೇಷನ್‌ ಸಿಂಧೂರ್‌’ ವೇಳೆ ನಾವು ಇದರ ಜೀವಂತ ಉದಾಹರಣೆ ನೋಡಿದ್ದೇವೆ