ನವದೆಹಲಿ: ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಗೌರವ ಸಮರ್ಪಿಸಿದರು.
ಕಾಂಗ್ರೆಸ್ನ ಮುಂದಾಳು ನೆಹರೂ ಅವರು ದೇಶದ ಪ್ರಧಾನಿಯಾಗಿ ಸುದೀರ್ಘ ಅವಧಿಯವರೆಗೂ ಸೇವೆ ಸಲ್ಲಿಸಿದರು. ನೆಹರೂ ಅವರು ಹುಟ್ಟಿದ ವರ್ಷ 1889.
'ಪಂಡಿತ್ ಜವಾಹರ್ಲಾಲ್ ನೆಹರೂ ಅವರ ಜನ್ಮದಿನಾಚರಣೆಯ ದಿನದಂದು ಅವರಿಗೆ ನಮನಗಳು' ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.
ಕಾಂಗ್ರೆಸ್ನ ಹಲವು ಮುಖಂಡರು ನೆಹರೂ ಅವರನ್ನು ನೆನಪಿಸುವ ಸಂದೇಶಗಳನ್ನು ಹಂಚಿಕೊಂಡು ಗೌರವ ಸೂಚಿಸಿದ್ದಾರೆ. 'ಆಧುನಿಕ ಭಾರತಕ್ಕೆ ಅಡಿಗಲ್ಲು ಹಾಕಿದ ದಾರ್ಶನಿಕ' ಎಂದು ಕಾಂಗ್ರೆಸ್ ಪಕ್ಷವು ಬಣ್ಣಿಸಿದೆ.
ನವದೆಹಲಿಯ ಶಾಂತಿ ವನದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಬೆಳಿಗ್ಗೆ ಪುಷ್ಪ ನಮನ ಸಲ್ಲಿಸಿದರು.
'ನಮ್ಮ ಸ್ವಾತಂತ್ರ್ಯ ಹೋರಾಟದ ನಾಯಕ, ಆಧುನಿಕ ಭಾರತಕ್ಕೆ ಅಡಿಗಲ್ಲು ಹಾಕಿಕೊಟ್ಟ ದಾರ್ಶನಿಕ, ಭಾರತದ ಹಿತಾಸಕ್ತಿಯ ರಕ್ಷಣೆಗಾಗಿ ನಿರ್ಭಿತಿಯಿಂದ ಮುನ್ನಡೆದ ರಾಷ್ಟ್ರೀಯವಾದಿ, ತಲೆಮಾರುಗಳ ಯೋಚನೆಗಳನ್ನು ಬದಲಿಸಿದ ಸ್ಫೂರ್ತಿದಾಯಕ ವ್ಯಕ್ತಿ, ಭಾರತ ಮಾತೆಯ ಸುಪುತ್ರ' ಎಂದು ಕಾಂಗ್ರೆಸ್ ನಮನ ಸಲ್ಲಿಸಿದೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟಿಸಿ, ಸತ್ಯ, ಒಗ್ಗಟ್ಟು ಮತ್ತು ಶಾಂತಿಗೆ ಪ್ರಾಮುಖ್ಯತೆ ನೀಡಿದವರು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.