ADVERTISEMENT

‘ಮನ್‌ ಕಿ ಬಾತ್‌’: ಜ.30ಕ್ಕೆ 11ರ ಬದಲಿಗೆ 11.30ಕ್ಕೆ ಪ್ರಸಾರ

ಪಿಟಿಐ
Published 23 ಜನವರಿ 2022, 10:44 IST
Last Updated 23 ಜನವರಿ 2022, 10:44 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಮಹಾತ್ಮ ಗಾಂಧೀಜಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಮುಂದಿನ ಭಾನುವಾರ ಪ್ರಧಾನ ಮಂತ್ರಿ ಅವರ ‘ಮನದ ಮಾತು’ ಕಾರ್ಯಕ್ರಮವನ್ನು ಈ ಮೊದಲಿನ ಸಮಯ ಬೆಳಿಗ್ಗೆ 11 ಗಂಟೆ ಬದಲಿಗೆ 11.30ಕ್ಕೆ ಪ್ರಸಾರವಾಗಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಭಾನುವಾರ ಹೇಳಿದೆ.

ಈ ತಿಂಗಳ ಕೊನೆಯ ಭಾನುವಾರ ಜನವರಿ 30 ರಂದು ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯಾಗಿದೆ.

‘ಮಹಾತ್ಮ ಗಾಂಧಿ ಅವರ ಪುಣ್ಯ ತಿಥಿ ಆಚರಣೆಯ ನಂತರ ಜನವರಿ 30 ರಂದು ನಡೆಯುವ ಈ ತಿಂಗಳ ಮನದ ಮಾತು ಕಾರ್ಯಕ್ರಮವು ಬೆಳಿಗ್ಗೆ 11.30ಕ್ಕೆ ಪ್ರಾರಂಭವಾಗಲಿದೆ’ ಎಂದು ಪಿಎಂಒ ಕಚೇರಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.