ADVERTISEMENT

ಮುಂಬೈಗೆ 14 ಉಗ್ರರ ಬಂದಿರುವ ಶಂಕೆ; ಪೊಲೀಸರಿಂದ ವ್ಯಾಪಕ ಭದ್ರತೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 6:23 IST
Last Updated 6 ಸೆಪ್ಟೆಂಬರ್ 2025, 6:23 IST
   

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈಗೆ 14 ಮಂದಿ ಉಗ್ರರು ನುಗ್ಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಗಣೇಶೋತ್ಸವ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚರಿಕೆವಹಿಸಿದ್ದಾರೆ. 

ಸಂಚಾರ ಪೊಲೀಸರ ನಿಯಂತ್ರಣ ಕೊಠಡಿಯ ವಾಟ್ಸ್ಆ್ಯಪ್‌ ಸಂಖ್ಯೆಗೆ ಈ ಸಂದೇಶ ಬಂದಿದೆ. ನಗರಕ್ಕೆ 14 ಜನ ಭಯೋತ್ಪಾದಕರು ಬಂದಿದ್ದು ಸುಮಾರು 400 ಕೆ.ಜಿ ಆರ್‌ಡಿಎಕ್ಸ್‌ ಅನ್ನು 34 ವಾಹನಗಳಲ್ಲಿ ಇಡಲಾಗಿದ್ದು ಒಂದು ಕೋಟಿಗೂ ಹೆಚ್ಚು ಜನರ ರಕ್ತ ಹರಿಸಲಾಗುವುದು ಎಂದು ಉಗ್ರರು ಸಂದೇಶದಲ್ಲಿ ತಿಳಿಸಿದ್ದಾರೆ.

ಲಷ್ಕರ್‌ ಜಿಹಾದಿ ಉಗ್ರ ಸಂಘಟನೆ ಈ ಸಂದೇಶ ಕಳಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ADVERTISEMENT

ಬೆದರಿಕೆ ಸಂದೇಶ ಬಂದಿರುವುದು ನಿಜ, ಇದು ಹುಸಿ ಸಂದೇಶ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಎಲ್ಲಾ ಆಯಾಮಗಳಲ್ಲಿ ವಿವಿಧ ತಂಡಗಳು ತನಿಖೆ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಮಹಾನಗರದಲ್ಲಿ ಗಣೇಶೋತ್ಸವ ವಿಸರ್ಜನೆ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಎಲ್ಲಾ ಕಡೆ ಭದ್ರತೆ ಕೈಗೊಳ್ಳಲಾಗಿದೆ. ನೂರಾರು ರಸ್ತೆಗಳಲ್ಲಿ ಚೆಕ್‌ ಪೋಸ್ಟ್‌ ನಿರ್ಮಿಸಲಾಗಿದ್ದು ವ್ಯಾಪಕ ತಪಾಸಣೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.