ನವದೆಹಲಿ: ದೇಶದಾದ್ಯಂತ ಚುನಾವಣಾ ಪೂರ್ವಸಮೀಕ್ಷೆಯ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ವಿವಿಧ ಸುದ್ದಿಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದ್ದು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ಚುನಾವಣಾ ಪೂರ್ವಸಮೀಕ್ಷೆ ಪ್ರಕಟವಾಗಲು ಕ್ಷಣಗಣನೆ ನಡೆಯುತ್ತಿದ್ದಾಗ ಟ್ವೀಟ್ ಮಾಡಿದ ಕೇಂದ್ರ ಶಿಕ್ಷಣ ಸಚಿವ ಪ್ರಕಾಶ್ ಜಾವಡೇಕರ್, ಇವತ್ತು 5 ಗಂಟೆಯ ನಂತರ ಎಕ್ಸಿಟ್ ಪೋಲ್ ಭವಿಷ್ಯ ನುಡಿಯಲಿದೆ. ಆದರೆ ಮೇ.23ರಂದು ಪ್ರಕಟವಾಗುವ ಎಕ್ಸಾಟ್ ಪೋಲ್ ನಿಜವಾದ ಫಲಿತಾಂಶ ನೀಡಲಿದೆ ಎಂದಿದ್ದಾರೆ.
ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ ಜಾವಡೇಕರ್, 2014ರ ಚುನಾವಣೆಯಲ್ಲಿ ಗಳಿಸಿದ ಸೀಟುಗಳಿಗಿಂತ ಹೆಚ್ಚು ಸೀಟು ಗಳಿಸಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೇರಲಿದ್ದಾರೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.