ಬೆಂಗಳೂರು: ಬ್ಯಾಂಕ್ಗಳಿಗೆ, ಸರ್ಕಾರಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರದಲ್ಲಿ ಅತಿಹೆಚ್ಚು ಋಣಿಯಾಗಿರುವ ಗ್ರೂಪ್ ಇದು ಎಂದು 'ಅದಾನಿ ಗ್ರೂಪ್'ಅನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.
ಟ್ವೀಟ್ನಲ್ಲಿ ಅದಾನಿ ಗ್ರೂಪ್ಗೆ ಸಂಬಂಧಿಸಿದ 'ನಿಮಗಿದು ಗೊತ್ತೆ?' ಎಂಬ ತಲೆಬರಹವಿರುವ ಪೋಸ್ಟರ್ ಒಂದನ್ನು ಪ್ರಶಾಂತ್ ಭೂಷಣ್ ಪ್ರಕಟಿಸಿದ್ದಾರೆ. ಪೋಸ್ಟರ್ನಲ್ಲಿ, 'ಅದಾನಿ ಗ್ರೂಪ್'ನ ಕಂಪನಿಗಳ ಒಟ್ಟು ಬ್ಯಾಂಕ್ ಬ್ಯಾಲೆನ್ಸ್ ₹ 26,000 ಕೋಟಿ. ಆದರೆ ಕಂಪನಿಗಳ ಸಾಲವು ಇದೇ ಮಾರ್ಚ್ ತಿಂಗಳ ಅಂತ್ಯಕ್ಕೆ ₹ 2.22 ಶತಕೋಟಿಗೆ ತಲುಪಿದೆ. ಇದು ಸಾಲದ ಹೊಸ ಮೈಲಿಗಲ್ಲು ಎಂದು ವಿವರಿಸಲಾಗಿದೆ.
'ಒಂದು ವೇಳೆ ಮುಂದೊಂದು ದಿನ ಈ ಮನುಷ್ಯ (ಗೌತಮ್ ಅದಾನಿ) ಭಾರತವನ್ನು ಬಿಟ್ಟು ಓಡಿ ಹೋದರೆ ರಾಷ್ಟ್ರದ ಸಂಪೂರ್ಣ ಬ್ಯಾಂಕಿಂಗ್ ಸೆಕ್ಟರ್ ಪತನಗೊಳ್ಳಲಿದೆ' ಎಂದು ಪೋಸ್ಟರ್ನಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.