ರಾಯ್ ಬರೇಲಿ: ‘ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಅವರ ತಾಯಿ ಸಂಕಷ್ಟದಲ್ಲಿದ್ದಾಗ ಮಾತ್ರ ಇಲ್ಲಿ ಕಾಣಿಸಿಕೊಳ್ಳುತ್ತಾರೆ’ – ಇಂತಹ ಒಕ್ಕಣೆಯಿರುವ ಭಿತ್ತಿಪತ್ರಗಳು ಸೋನಿಯಾ ಗಾಂಧಿ ಅವರ ಕ್ಷೇತ್ರ ರಾಯಬರೇಲಿಯಲ್ಲಿ ಗುರುವಾರ ಕಂಡುಬಂದವು.
ಪಕ್ಷದ ಕಾರ್ಯಕರ್ತರ ಭೇಟಿಗಾಗಿ ಗುರುವಾರ ಇಲ್ಲಿಗೆ ಭೇಟಿ ನೀಡಿದ್ದ ಪ್ರಿಯಾಂಕಾ ವಿರುದ್ಧ ಭಿತ್ತಿಪತ್ರಗಳ ಮೂಲಕ ಪ್ರತಿಭಟನೆ ಮಾಡಲಾಯಿತು. ಬೆಳಿಗ್ಗೆಯೇ ಕಾಂಗ್ರೆಸ್ ಕಚೇರಿ ತಿಲಕ್ ಭವನದ ಸಮೀಪದಲ್ಲೇ ಪ್ರಿಯಾಂಕಾ–ಸೋನಿಯಾ ಚಿತ್ರವಿರುವ ಭಿತ್ತಿಪತ್ರಗಳು ಕಾಣಿಸಿಕೊಂಡವು.
ಬುಧವಾರ ಅಮೇಠಿಯಲ್ಲಿಯೂ ಪ್ರಿಯಾಂಕಾ ವಿರುದ್ಧದ ಕೆಲ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ‘ನಮ್ಮನ್ನೇಕೆ ನೀವು ಮೂರ್ಖರನ್ನಾಗಿಸುತ್ತೀರಿ. 5 ವರ್ಷದ ಬಳಿಕ ಏಕೆ ಇಲ್ಲಿ ಕಾಣಿಸಿಕೊಳ್ಳುತ್ತೀರಿ’ ಎಂದು ಪ್ರಶ್ನಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.