ADVERTISEMENT

ರಾಜಪಥ ನವೀಕರಣ: ಭೂಮಿಪೂಜೆ ನೆರವೇರಿಸಿದ ಸಚಿವ ಹರ್ದೀಪ್‌ ಸಿಂಗ್‌ ಪುರಿ

ಪಿಟಿಐ
Published 4 ಫೆಬ್ರುವರಿ 2021, 10:07 IST
Last Updated 4 ಫೆಬ್ರುವರಿ 2021, 10:07 IST
ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್‌ ನಡುವಿನ ಸೆಂಟ್ರಲ್‌ ವಿಸ್ತಾ ನವೀಕರಣ ಕಾರ್ಯಕ್ಕೆ ಕೇಂದ್ರ ವಸತಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ಗುರುವಾರ ಭೂಮಿಪೂಜೆ ನೆರವೇರಿಸಿದರು
ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್‌ ನಡುವಿನ ಸೆಂಟ್ರಲ್‌ ವಿಸ್ತಾ ನವೀಕರಣ ಕಾರ್ಯಕ್ಕೆ ಕೇಂದ್ರ ವಸತಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ಗುರುವಾರ ಭೂಮಿಪೂಜೆ ನೆರವೇರಿಸಿದರು   

ನವದೆಹಲಿ: ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್‌ ನಡುವಿನ ಸೆಂಟ್ರಲ್‌ ವಿಸ್ತಾ ನವೀಕರಣ ಕಾರ್ಯಕ್ಕೆ ಕೇಂದ್ರ ವಸತಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ಗುರುವಾರ ಭೂಮಿಪೂಜೆ ನೆರವೇರಿಸಿದರು.

ಇಂಡಿಯಾ ಗೇಟ್‌ ಬಳಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ್‌ ಮಿಶ್ರಾ ಹಾಗೂ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ನವೀಕರಣಗೊಂಡ ರಾಜಪಥದಲ್ಲಿ ಮುಂದಿನ ವರ್ಷ ಗಣರಾಜ್ಯೋತ್ಸವದ ಪಥಸಂಚಲನ ನಡೆಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ADVERTISEMENT

ಶಾಪೂರಜಿ ಪಲ್ಲೋಂಜಿ ಆ್ಯಂಡ್‌ ಕಂ. ಈ ನವೀಕರಣ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಯೋಜನಾ ವೆಚ್ಚ ₹ 477.08 ಕೋಟಿ. ಅಂಡರ್‌ಪಾಸ್‌ಗಳು, ಕಲ್ಲಿನಲ್ಲಿ ಕೆತ್ತನೆಯ ಕಾಮಗಾರಿ, ಉದ್ಯಾನಗಳ ನಿರ್ಮಾಣವನ್ನು ಈ ಯೋಜನೆ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.