ADVERTISEMENT

ಶಬರಿಮಲೆಯಲ್ಲಿ ಭಕ್ತ ಸಾಗರ

ಪಿಟಿಐ
Published 17 ನವೆಂಬರ್ 2025, 4:27 IST
Last Updated 17 ನವೆಂಬರ್ 2025, 4:27 IST
<div class="paragraphs"><p><strong>ಬಾಗಿಲು ತೆರೆದ ಶಬರಿಮಲೆ ದೇಗುಲ</strong></p></div>

ಬಾಗಿಲು ತೆರೆದ ಶಬರಿಮಲೆ ದೇಗುಲ

   

ಪಿಟಿಐ ಚಿತ್ರ

ಶಬರಿಮಲೆ (ಕೇರಳ): ಎರಡು ತಿಂಗಳಿಗೂ ಹೆಚ್ಚು ಕಾಲ ನಡೆಯುವ ತೀರ್ಥಯಾತ್ರೆಯು ವೃಶ್ಚಿಕದ ಮಲಯಾಳಂ ಮಾಸದ ಮೊದಲ ದಿನವಾದ ಇಂದು ಅಯ್ಯಪ್ಪ ದೇವಸ್ಥಾನದಲ್ಲಿ ನೂರಾರು ಭಕ್ತರು ನೆರೆದಿದ್ದರು.

ADVERTISEMENT

ವಿವಿಧ ರಾಜ್ಯಗಳಿಂದ ಬಂದಿದ್ದ ಭಕ್ತರು ಸಾಂಪ್ರದಾಯಿಕ ಉಡುಪು ಧರಿಸಿ ತಲೆಯ ಮೇಲೆ ‘ಇರುಮುಡಿ’ ಹೊತ್ತು ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿತು.

ಹೊಸದಾಗಿ ನೇಮಕಗೊಂಡ ಮುಖ್ಯ ಅರ್ಚಕ ಇ.ಡಿ. ಪ್ರಸಾದ್ ನಂಬೂದಿರಿ ಅವರು ದೇವಾಲಯದ ದ್ವಾರಗಳನ್ನು ತೆರೆದಾಗ, ಭಕ್ತರು ಒಗ್ಗಟ್ಟಿನಿಂದ ಅಯ್ಯಪ್ಪ ಸ್ವಾಮಿಯ ಸ್ತೋತ್ರಗಳನ್ನು ಪಠಿಸಿದರು. ಬಳಿಕ ನಿರ್ಮಾಲ್ಯಂ ಮತ್ತು ಅಭಿಷೇಕ ಸೇರಿ ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. 

ಮಧ್ಯಾಹ್ನ 1 ಗಂಟೆಗೆ ದೇವಾಲಯ ಮುಚ್ಚಲಿದ್ದು, ಮಧ್ಯಾಹ್ನ 3 ಗಂಟೆಗೆ ಮತ್ತೆ ತೆರೆಯಲಾಗುತ್ತದೆ. ರಾತ್ರಿ 11 ಗಂಟೆಗೆ ಹರಿವರಾಸನಂ ಪಠಣ, ಅಯ್ಯಪ್ಪ ದೇವರ ಲಾಲಿಯೊಂದಿಗೆ ದಿನದ ಪೂಜೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಟಿಡಿಪಿ ಹೇಳಿದೆ.

ವಾರ್ಷಿಕ ಮಂಡಲಂ– ಮಕರವಿಳಕ್ಕು ತೀರ್ಥಯಾತ್ರೆಯ ಋತುವಿನ ಪೂರ್ವಭಾವಿಯಾಗಿ ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ಭಾನುವಾರ ಸಂಜೆ ತೆರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.