ನವದೆಹಲಿ:ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಅಧ್ಯಕ್ಷ ಅನಿಲ್ ಕುಮಾರ್ ಚೌಧರಿ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.ಬುಧವಾರ ರಾತ್ರಿ ದಕ್ಷಿಣ ದೆಹಲಿಯಲ್ಲಿ ಈ ಪ್ರಕರಣ ನಡೆದಿದೆ.
ಅನಿಲ್ ಕುಮಾರ್ ಚೌಧರಿ ಅವರು ಮನೆಗೆ ತೆರಳುತ್ತಿದ್ದ ವೇಳೆ ಎಚ್ಯುಡಿಸಿಒ (HUDCO) ಬಳಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.ತಕ್ಷಣವೇ ದೆಹಲಿ ಪೊಲೀಸ್ ಸ್ಥಳಕ್ಕಾಗಮಿಸಿ ಇಬ್ಬರು ದುಷ್ಕರ್ಮಿಗಳನ್ನು ಸೆರೆ ಹಿಡಿದಿದ್ದು, ಇಬ್ಬರು ತಪ್ಪಿಸಿಕೊಂಡಿದ್ದಾರೆ.
ಬುಧವಾರ ರಾತ್ರಿ 10.30ಕ್ಕೆ ಹಜ್ ಖಾಸ್ ದಾಟಿದ ನಂತರ ಬೇರೊಂದು ವಾಹನ ಚೌಧರಿ ಅವರ ವಾಹನಕ್ಕೆ ಉದ್ದೇಶಪೂರ್ವಕ ಡಿಕ್ಕಿ ಹೊಡೆದಿತ್ತು.ಡಿಕ್ಕಿ ಹೊಡೆದಾಗ ಚೌಧರಿ ಮತ್ತು ಅವರ ಚಾಲಕ ರಸ್ತೆಗಿಳಿದರು.ಆ ಹೊತ್ತಲ್ಲಿ ಇನ್ನೊಂದು ಕಾರಿನಿಂದ ಇಳಿದ ವ್ಯಕ್ತಿಗಳು ಚಾಲಕನ ಕತ್ತು ಹಿಡಿದು, ಚೌಧರಿಯವರ ಮೇಲೆ ಕಬ್ಬಿಣದ ರಾಡ್ನಿಂದ ಹೊಡದಿದ್ದಾರೆ.ದುಷ್ಕರ್ಮಿಗಳ ಕೈಯಲ್ಲಿ ಕತ್ತಿಯೂ ಇತ್ತು, ಚಾಲಕನಿಗೆ ಗಾಯಳೇನೂ ಆಗಿಲ್ಲ ಎಂದು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಹೇಳಿಕೆ ನೀಡಿದೆ.
ಚೌಧರಿ ಅವರಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ದುಷ್ಕರ್ಮಿಗಳ ದಿಢೀರ್ ದಾಳಿಯಿಂದ ನಾನು ತತ್ತರಿಸಿ ಹೋದೆ.ಅದು ಹತ್ಯೆ ಪ್ರಯತ್ನ ಆಗಿತ್ತು ಎಂದು ಚೌಧರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.