ಮುಂಬೈ: ವೈದ್ಯಕೀಯ ಚಿಕಿತ್ಸೆಗಾಗಿ ಸ್ವಲ್ಪ ಸಮಯ ನಟನೆಯಿಂದ ಬಿಡುವು ಪಡೆಯುವುದಾಗಿ ಬಾಲಿವುಡ್ ನಟ ಸಂಜಯ್ ದತ್ ಮಂಗಳವಾರ ಟ್ವೀಟ್ ಮುಖಾಂತರ ಹೇಳಿದ್ದಾರೆ.
ಅಭಿಮಾನಿಗಳು ಯಾವುದೇ ತರಹದ ಊಹಾಪೋಹಗಳನ್ನು ಹರಡದಂತೆ ಇದೇ ವೇಳೆ ದತ್ ಕರೆ ನೀಡಿದ್ದಾರೆ. ಕಳೆದ ವಾರಾಂತ್ಯದಲ್ಲಿ ಉಸಿರಾಟದ ಸಮಸ್ಯೆಯಿಂದಾಗಿ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ದತ್, ಸೋಮವಾರ ಮನೆಗೆ ಮರಳಿದ್ದರು.
‘ಶೀಘ್ರದಲ್ಲೇ ನಾನು ನಟನೆಗೆ ಮರಳಲಿದ್ದೇನೆ.ಜನರ ಪ್ರೀತಿ, ಬೆಂಬಲ ಹೀಗೇ ಇರಲಿ’ ಎಂದು ಟ್ವೀಟ್ನಲ್ಲಿ ಅವರು ಉಲ್ಲೇಖಿಸಿದ್ದಾರೆ. ದತ್ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಅವರ ಆರೋಗ್ಯದ ಕುರಿತು ಹಲವು ಗಾಳಿಸುದ್ದಿಗಳು ಹರಿದಾಡಿದ್ದವು. ದತ್ ಅಭಿನಯದ ‘ಸಡಕ್–2’ ಮತ್ತು ‘ಭುಜ್: ದಿ ಪ್ರೈಡ್ ಆಫ್ ಇಂಡಿಯಾ’ ಸಿನಿಮಾಗಳು ಡಿಸ್ನಿ+ಹಾಟ್ಸ್ಟಾರ್ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಜೊತೆಗೆ ಕನ್ನಡದ ಕೆಜಿಎಫ್ ಎರಡನೇ ಭಾಗ ಹಾಗೂ ‘ಶಮ್ಶೀರಾ’ದಲ್ಲಿ ರಣಬೀರ್ ಕಪೂರ್ ಜೊತೆಯೂ ದತ್ ಬಣ್ಣ ಹಚ್ಚಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.