ಉತ್ತರಕಾಶಿ: ಉತ್ತರಾಖಂಡದ ಬಾರ್ಕೊಟ್ ಪಟ್ಟಣದಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ ಸಿಲುಕಿದ್ದ 12 ಜನರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಗುರುವಾರ ರಕ್ಷಿಸಿದೆ.
‘ಉತ್ತರಕಾಶಿ ಜಿಲ್ಲೆಯ ಬಾರ್ಕೊಟ್ ಪಟ್ಟಣದ ರಸ್ತೆಯಲ್ಲಿ ಭಾರಿ ಹಿಮಪಾತ ಸಂಭವಿಸಿದ್ದ ಕಾರಣ 3–4 ವಾಹನಗಳು ಮತ್ತು 12 ಜನರು ಸಿಲುಕಿದ್ದರು. ಹಿಮಪಾತದಿಂದಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಎಸ್ಡಿಆರ್ಎಫ್ ಮಾಹಿತಿ ನೀಡಿದೆ.
ಸದ್ಯ ರಕ್ಷಿಸಲಾಗಿರುವ 12 ಜನರು ಮದುವೆ ಸಮಾರಂಭದ ಸಲುವಾಗಿ ಅಗೋಡಾದಿಂದ ಓಜ್ರಿಗೆ ತೆರಳುತ್ತಿದ್ದರು ಎಂದೂ ಎಸ್ಡಿಆರ್ಎಫ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.