ADVERTISEMENT

ಭದ್ರತಾ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿವೆ: ಸಚಿವ ರಾಜನಾಥ್ ಸಿಂಗ್

ಬಾಲಾಕೋಟ್‌ನಲ್ಲಿ ಉಗ್ರ ಶಿಬಿರ ಮತ್ತೆ ಸಕ್ರಿಯ ವರದಿಗೆ ರಕ್ಷಣಾ ಸಚಿವರ ಪ್ರತಿಕ್ರಿಯೆ

ಏಜೆನ್ಸೀಸ್
Published 25 ಸೆಪ್ಟೆಂಬರ್ 2019, 11:04 IST
Last Updated 25 ಸೆಪ್ಟೆಂಬರ್ 2019, 11:04 IST
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್    

ಚೆನ್ನೈ:ಯಾವುದೇ ಸಂಭಾವ್ಯತೆಯನ್ನು ಎದುರಿಸಲು ಭದ್ರತಾ ಪಡೆಗಳು ಸನ್ನದ್ಧವಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ಬಾಲಾಕೋಟ್‌ನಲ್ಲಿ ಉಗ್ರರ ಶಿಬಿರಗಳು ಮತ್ತೆ ಸಕ್ರಿಯವಾಗಿರುವ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನೀಡಿರುವ ಮಾಹಿತಿಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

‘ಯಾವುದೇ ಆತಂಕ ಬೇಡ. ನಮ್ಮ ಭದ್ರತಾಪಡೆಗಳು ಸರ್ವಸನ್ನದ್ಧವಾಗಿವೆ’ ಎಂದು ಅವರು ಹೇಳಿದರು.

ವಾಯುಪಡೆಯು ಫೆಬ್ರುವರಿಯಲ್ಲಿ ವಾಯುದಾಳಿ ನಡೆಸಿ ನಾಶ ಮಾಡಿದ್ದ ಬಾಲಾಕೋಟ್‌ನ ಉಗ್ರರ ಶಿಬಿರಗಳನ್ನು ಪಾಕಿಸ್ತಾನವು ಮತ್ತೆ ಸಕ್ರಿಯಗೊಳಿಸಿದೆ. ಸುಮಾರು 500 ಉಗ್ರರು ಭಾರತದೊಳಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸೇನೆಯ ಮುಖ್ಯಸ್ಥ ಬಿಪಿನ್‌ ರಾವತ್‌ ಸೋಮವಾರ ತಿಳಿಸಿದ್ದರು.

ಆದರೆ, ರಾವತ್ ಹೇಳಿಕೆ ಆಧಾರರಹಿತ ಎಂದು ಪಾಕಿಸ್ತಾನ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.