ADVERTISEMENT

ಅಯೋಧ್ಯೆ: ಇಂದು ‘ಧರ್ಮ ಸಭೆ’

ರಾಯಿಟರ್ಸ್
Published 24 ನವೆಂಬರ್ 2018, 19:45 IST
Last Updated 24 ನವೆಂಬರ್ 2018, 19:45 IST
   

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಭಾನುವಾರ ಇಲ್ಲಿ ಆಯೋಜಿಸಿರುವ ‘ಧರ್ಮ ಸಭೆ’ಯಲ್ಲಿ ಭಾಗವಹಿಸಲು ಸಾವಿರಾರು ಸಂಖ್ಯೆಯಲ್ಲಿ ಸಂತರು ಮತ್ತು ಧಾರ್ಮಿಕ ನಾಯಕರು ಇಲ್ಲಿ ಸೇರಿದ್ದಾರೆ.

ವಿಎಚ್‌ಪಿ ಕಾರ್ಯಕರ್ತರೂ ಸಾವಿರಾರು ಸಂಖ್ಯೆಯಲ್ಲಿ ಅಯೋಧ್ಯೆಗೆ ಬಂದಿಳಿಯುತ್ತಿದ್ದಾರೆ.

‘ಧರ್ಮಸಭೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ. 1992ರಲ್ಲಿ ಸೇರಿದ್ದಕ್ಕಿಂತ ಹಲವು ಪಟ್ಟು ಹೆಚ್ಚು ಜನ ಈ ಬಾರಿ ಅಯೋಧ್ಯೆಯಲ್ಲಿ ಸೇರಲಿದ್ದಾರೆ’ ಎಂದು ವಿಎಚ್‌ಪಿಯ ಅಖಿಲ ಭಾರತ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.