ADVERTISEMENT

ಪಂಜಾಬ್‌: ಎಜಿ ವಿರುದ್ಧ ಸಿಧು ವಾಗ್ದಾಳಿ

ಪಿಟಿಐ
Published 7 ನವೆಂಬರ್ 2021, 13:30 IST
Last Updated 7 ನವೆಂಬರ್ 2021, 13:30 IST
ನವಜೋತ್‌ ಸಿಂಗ್‌ ಸಿಧು
ನವಜೋತ್‌ ಸಿಂಗ್‌ ಸಿಧು   

ಚಂಡೀಗಡ: ‘ನ್ಯಾಯ ಕುರುಡಾಗಿದೆಯೇ ಹೊರತು ಪಂಜಾಬಿನ ಜನರಲ್ಲ’ ಎಂದು ಟ್ವೀಟ್‌ ಮಾಡುವ ಮೂಲಕ ಪಂಜಾಬ್‌ ಕಾಂಗ್ರೆಸ್‌ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರು ರಾಜ್ಯದ ಅಡ್ವೊಕೇಟ್‌ ಜನರಲ್‌ ಎ.ಪಿ.ಎಸ್‌. ಡಿಯೋಲ್‌ ಅವರಿಗೆ ತಿರುಗೇಟು ನೀಡಿದ್ದಾರೆ.

‘ಸಿಧು ಅವರು ರಾಜ್ಯ ಸರ್ಕಾರ ಮತ್ತು ತಮ್ಮ ಕಚೇರಿಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ ಹಾಗೂ ರಾಜಕೀಯ ಲಾಭಕ್ಕಾಗಿ ತಪ್ಪು ಮಾಹಿತಿ ಹರಡುತ್ತಿದ್ದಾರೆ’ ಎಂದು ಅಡ್ವೊಕೇಟ್ ಜನರಲ್ ಆರೋಪಿಸಿದ ಮರು ದಿನವಾದ ಭಾನುವಾರ ಸಿಧು ಸರಣಿ ಟ್ವೀಟ್‌ಗಳ ಮೂಲಕ ವಾಗ್ದಾಳಿ ಮಾಡಿದ್ದಾರೆ.

‘ಮಿಸ್ಟರ್‌ ಎಜಿ ಅವರೇ, ನ್ಯಾಯ ಕುರುಡಾಗಿರಬಹುದು, ಆದರೆ ಪಂಜಾಬಿನ ಜನರಲ್ಲ. ಗುರು ಗ್ರಂಥ ಸಾಹಿಬ್‌ನ ಅಪಮಾನ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ನಮ್ಮ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಪ್ರಕರಣದಲ್ಲಿ ನೀವು ಮುಖ್ಯ ಸಂಚುಕೋರರು ಅಥವಾ ಆರೋಪಿಗಳ ಪರ ಹೈಕೋರ್ಟ್‌ನಲ್ಲಿ ನಮ್ಮ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಿರಿ’ ಎಂದು ಸಿಧು ದೂರಿದ್ದಾರೆ.

ADVERTISEMENT

‘ಇಂದು ನೀವು, ಅಧಿಕಾರದಲ್ಲಿರುವ ಅದೇ ಕಾಂಗ್ರೆಸ್‌ ಪಕ್ಷದ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದೀರಿ. ನಾನು ತಪ್ಪು ಮಾಹಿತಿ ಹರಡುತ್ತಿದ್ದೇನೆ ಎಂದು ದೂರುತ್ತಿದ್ದೀರಿ. ನಾನು ಗುರು ಗ್ರಂಥ ಸಾಹಿಬ್‌ ಅಪಮಾನ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಹೋರಾಡುತ್ತಿದ್ದೇನೆ. ಆದರೆ ನೀವು ಆರೋಪಿಗಳನ್ನು ರಕ್ಷಿಸುತ್ತಿದ್ದೀರಿ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.