ಮಾನ್ಸಾ (ಪಂಜಾಬ್): ದುಷ್ಕರ್ಮಿಗಳ ಗುಂಡೇಟಿನಿಂದ ಹತ್ಯೆಗೀಡಾದ ಪಂಜಾಬಿ ಜನಪ್ರಿಯ ಗಾಯಕ ಸಿಧು ಮೂಸೆವಾಲಾ ಅವರ ಅಂತ್ಯಕ್ರಿಯೆಯು ಮಾನ್ಸಾ ಜಿಲ್ಲೆಯ ಅವರ ಸ್ವಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು.
ಹೂವಿನಿಂದ ಅಲಂಕರಿಸಿದ್ದ ಸಿಧು ಅವರ ನೆಚ್ಚಿನ ಟ್ರ್ಯಾಕ್ಟರ್ನಲ್ಲಿಯೇ ಅವರ ಮೃತದೇಹವನ್ನಿರಿಸಿ, ಮೆರವಣಿಗೆ ಮೂಲಕ ಅವರ ಹೊಲಕ್ಕೆ ಕರೆದೊಯ್ಯಲಾಯಿತು. ದಾರಿಯುದ್ದಕ್ಕೂ ಸಾವಿರಾರು ಮಂದಿ ತಮ್ಮ ನೆಚ್ಚಿನ ಗಾಯಕನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ಕಣ್ಣೀರಿನಿಂದ ಬೀಳ್ಕೊಟ್ಟರು.
ಅಭಿಮಾನಿಗಳು ಸಿಧು ಅವರ ಚಿತ್ರವಿದ್ದ ಟೀಶರ್ಟ್ ಧರಿಸಿ ಅಂತಿಮ ನಮನ ಸಲ್ಲಿಸಿದರೆ, ಪಂಜಾಬ್ ಕಾಂಗ್ರೆಸ್ನ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.