ADVERTISEMENT

ಮಾನಸಿಕ ದೌರ್ಬಲ್ಯ, ಸಂಕಷ್ಟ ಅನುಭವಿಸುವ ಮಕ್ಕಳ ನೆರವಿಗೆ ‘ಸಂವಾದ್’: ಸ್ಮೃತಿ ಇರಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2021, 5:58 IST
Last Updated 15 ಆಗಸ್ಟ್ 2021, 5:58 IST
ಸಂವಾದ್‌ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ನಿಮ್ಹಾನ್ಸ್‌ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮತ್ತಿತರರು (ಚಿತ್ರಗಳು –ಪಿಐಬಿ)
ಸಂವಾದ್‌ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ನಿಮ್ಹಾನ್ಸ್‌ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮತ್ತಿತರರು (ಚಿತ್ರಗಳು –ಪಿಐಬಿ)   

ಬೆಂಗಳೂರು: ಮಾನಸಿಕ ದುರ್ಬಲ್ಯ ಅನುಭವಿಸುತ್ತಿರುವ, ಸಂಕಷ್ಟದಲ್ಲಿರುವ ಮಕ್ಕಳಿಗೆ ಸಲಹೆ ನೀಡಲು, ಆಥ್ಮಸ್ಥೈರ್ಯ ತುಂಬಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನಿಮ್ಹಾನ್ಸ್ ಜತೆಯಾಗಿ ‘ಸಂವಾದ್' ಎಂಬ ವೇದಿಕೆ ರೂಪಿಸಿವೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ನಿಮ್ಹಾನ್ಸ್-ನರವಿಜ್ಞಾನ ಸಂಸ್ಥೆಯ ‘ಸಂವಾದ್‌’ ('SAMVAD- Support, Advocacy, & Mental health interventions for children in Vulnerable circumstances and Distress) ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ‘ಸಂವಾದ್’ನಿಂದ ದೇಶದ ಕರ್ತವ್ಯನಿರತ ಒಂದು ಲಕ್ಷ ಜನರಿಗೆ ನೆರವು ಸಿಕ್ಕಿದೆ. ಮಕ್ಕಳ ರಕ್ಷಣೆ ಮತ್ತು ಮಾನಸಿಕ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಪಂಚಾಯತಿ ರಾಜ್ ಇಲಾಖೆಯೊಂದಿಗೆ ಸೇರಿ ‘ಸಂವಾದ್‌’ ಕೆಲಸ ಮಾಡುತ್ತಿದೆ,‘ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ.

‘ಸಂವಾದ್’ ಕೇವಲ ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಕರ್ತವ್ಯ ನಿರತರಿಗಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ, ಜೊತೆಗೆ ಕೌಟುಂಬಿಕ ದೌರ್ಜನ್ಯ, ಮದ್ಯಪಾನ ಮೊದಲಾದವುಗಳಿಂದ ಸಂಕಷ್ಟ ಅನುಭವಿಸುತ್ತಿರು ಕುಟುಂಬಗಳ ಮೇಲಿನ ಪರಿಣಾಮದ ನಿವಾರಣೆಗೆ ಕೆಲಸ ಮಾಡುತ್ತಿದೆ. ಸಂಶೋಧನೆಯನ್ನೂ ನಡೆಸುತ್ತಿದೆ’ ಎಂದರು.

ADVERTISEMENT

ನಿಮ್ಹಾನ್ಸ್ ನ ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಶೇಖರ್ ಶೇಷಾದ್ರಿ ಸಂವಾದ್ ಕುರಿತು ವಿವರ ನೀಡಿದರು. ಈ ವರ್ಷ ‘ಸಂವಾದ್’ ದೇಶಾದ್ಯಂತ ಮಕ್ಕಳ ಸಂರಕ್ಷಣೆಯ ಅಗತ್ಯಗಳನ್ನು ಪೂರೈಸಲು ಇನ್ನೂ ಹೆಚ್ಚು ಕೆಲಸ ಮಾಡಲಿದೆ ಎಂದರು.

ನಿಮ್ಹಾನ್ಸ್‌ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.