ADVERTISEMENT

ಸುಲ್ಲಿ ಡೀಲ್ಸ್‌ ಸೃಷ್ಟಿಕರ್ತನಿಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ಪಿಟಿಐ
Published 16 ಜನವರಿ 2022, 16:27 IST
Last Updated 16 ಜನವರಿ 2022, 16:27 IST
.
.   

ನವದೆಹಲಿ: ವಿವಾದಾತ್ಮಕ ಸುಲ್ಲಿ ಡೀಲ್ಸ್ ಆ್ಯಪ್‌ ಅನ್ನು ಸೃಷ್ಟಿಸಿದ ಆರೋಪದ ಮೇರೆಗೆ ಬಂಧಿತನಾಗಿರುವ ಓಂಕಾರೇಶ್ವರ ಠಾಕೂರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿಯ ನ್ಯಾಯಾಲಯವೊಂದು ತಿರಸ್ಕರಿಸಿದೆ. ಈ ಹಂತದಲ್ಲಿ ಜಾಮೀನು ನೀಡಿದರೆ ನಿಷ್ಪಕ್ಷಪಾತ ತನಿಖೆಯ ಹಾದಿ ತಪ್ಪಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನೂರಕ್ಕೂ ಅಧಿಕ ಖ್ಯಾತ ಮುಸ್ಲಿಂ ಮಹಿಳೆಯರ ಕುರಿತು ಮಾಹಿತಿ ನೀಡಿ ಬಳಕೆದಾರರು ಅವರ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಮಾಡುವ ಈ ಸುಲ್ಲಿ ಡೀಲ್ಸ್‌ ಆ್ಯಪ್‌ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಬುಲ್ಲಿ ಬಾಯಿ ಆ್ಯಪ್‌ ಪ್ರಕರಣದ ರೂವಾರಿ ನೀರಜ್‌ ಬಿಷ್ಣೋಯ್‌ ಎಂಬಾತ ತನಿಖೆಯ ವೇಳೆ ನೀಡಿದ ಮಾಹಿತಿ ಮೇರೆಗೆ ದೆಹಲಿಯ ವಿಶೇಷ ಘಟಕದ ಪೊಲೀಸರು ಇಂದೋರ್‌ನಲ್ಲಿ ಕಳೆದ ವಾರ ಆರೋಪಿ ಓಂಕಾರೇಶ್ವರ ಠಾಕೂರ್‌ನನ್ನು ಬಂಧಿಸಿದ್ದರು.

ಜಾಮೀನು ಕುರಿತ ವಾದ, ಪ್ರತಿವಾದವನ್ನು ಆಲಿಸಿದ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ವಸುಂಧರಾ ಚೌಂಕರ್‌ ಅವರು ಆರೋಪಿಗೆ ಜಾಮೀನು ನಿರಾಕರಿಸಿ ಆದೇಶ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.