ADVERTISEMENT

ಸುನಂದಾ ಸಾವು: ದಾಖಲೆ ಹಸ್ತಾಂತರ

ಪಿಟಿಐ
Published 23 ಆಗಸ್ಟ್ 2018, 18:48 IST
Last Updated 23 ಆಗಸ್ಟ್ 2018, 18:48 IST
ಸುನಂದಾ ಪುಷ್ಕರ್
ಸುನಂದಾ ಪುಷ್ಕರ್   

ನವದೆಹಲಿ:ಸುನಂದಾ ಪುಷ್ಕರ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಅವರ ಪತಿ, ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರಿಗೆ ದೆಹಲಿ ಪೊಲೀಸರು ಗುರುವಾರ ಹಸ್ತಾಂತರಿಸಿದರು.

ತರೂರ್‌ ಪರ ಹಾಜರಿದ್ದ ವಕೀಲ ಗೌರವ್‌ಗುಪ್ತಾ ಅವರಿಗೆ ನೀಡಲಾಯಿತು. ಈ ಪ್ರಕರಣದಲ್ಲಿ ಪೊಲೀಸರಿಗೆ ನೆರವು ನೀಡಲು ಅನುಮತಿ ನೀಡುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿ
ಕೊಂಡರು. ಪೊಲೀಸರು ಈಗಾಗಲೇ ತನಿಖೆ ನಡೆಸಿದ್ದು, ಸುಬ್ರಮಣಿಯನ್‌ ಸ್ವಾಮಿ ಅವರ ಅಗತ್ಯ ಇಲ್ಲ ಎಂದು ತರೂರ್‌ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT