ADVERTISEMENT

ಯೋಗಿ ಸಂಪುಟ ತೊರೆದ ಮತ್ತೊಬ್ಬ ಸಚಿವ: 3 ದಿನದಲ್ಲಿ ಮೂವರು ಸಚಿವರು ಹೊರಕ್ಕೆ

ಪಿಟಿಐ
Published 13 ಜನವರಿ 2022, 15:58 IST
Last Updated 13 ಜನವರಿ 2022, 15:58 IST
ಧರಂ ಸಿಂಗ್ ಸೈನಿ
ಧರಂ ಸಿಂಗ್ ಸೈನಿ   

ಲಖನೌ: ಉತ್ತರ ಪ್ರದೇಶದ ಹಿಂದುಳಿದ ಜಾತಿಗಳ ನಾಯಕ ಧರಂ ಸಿಂಗ್ ಸೈನಿ ಗುರುವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರೊಂದಿಗೆ, ಉತ್ತರ ಪ್ರದೇಶದಲ್ಲಿ ಮೂರು ದಿನಗಳಲ್ಲಿ ಮೂವರು ಸಚಿವರು ಬಿಜೆಪಿ ತೊರೆದಂತಾಗಿದೆ.

ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರಿಗೆ ಆಯುಷ್ ಸಚಿವ ಸೈನಿ ಅವರು ಸಲ್ಲಿಸಿರುವ ರಾಜೀನಾಮೆ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ದಾರಾ ಸಿಂಗ್ ಚೌಹಾಣ್ ಅವರು ಈ ಹಿಂದೆ ಯೋಗಿ ಆದಿತ್ಯನಾಥ್‌ ಅವರ ಸಂಪುಟ ತೊರೆದಿದ್ದರು.

ADVERTISEMENT

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸೈನಿ ಅವರೊಂದಿಗೆ ಇರುವ ತಮ್ಮ ಚಿತ್ರವನ್ನು ಗುರುವಾರ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸೈನಿ ಎಸ್‌ಪಿ ಸೇರುವುದು ಖಚಿತವಾಗಿದೆ.

ಸಹರಾನ್‌ಪುರ ಜಿಲ್ಲೆಯ ನಕುಡ್‌ನಿಂದ ನಾಲ್ಕು ಬಾರಿ ಶಾಸಕರಾಗಿರುವ ಸೈನಿ, ಮೌರ್ಯ ಅವರಿಗೆ ಆಪ್ತರಾಗಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.