ADVERTISEMENT

News Express: ಮಹುವಾ ಮೊಯಿತ್ರಾಗೆ ಮತ್ತೆ ಲೋಕಸಭಾ ಟಿಕೆಟ್‌ ನೀಡಿದ ಟಿಎಂಸಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 13:55 IST
Last Updated 10 ಮಾರ್ಚ್ 2024, 13:55 IST

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಪಕ್ಷ, ಅಂದ್ರೆ ಟಿಎಂಸಿಯು ಲೋಕಸಭಾ ಚುನಾವಣೆಗೆ ರಾಜ್ಯದ ಎಲ್ಲ 42 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿದ್ದು, ಮಾಜಿ ಕ್ರಿಕೆಟಿಗರಾದ ಯೂಸುಫ್‌ ಪಠಾಣ್ ಮತ್ತು ಕೀರ್ತಿ ಆಜಾದ್ ಅವರನ್ನೂ ಕಣಕ್ಕಿಳಿಸಿದೆ. ಈಗ ಸುದ್ದಿಯಲ್ಲಿರುವ ಸಂದೇಶ್‌ ಖಾಲಿ ಪ್ರದೇಶವಿರುವ ಬಸಿರಾತ್‌ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದೆ ನುಸ್ರತ್‌ ಜಹಾನ್‌ ಅವರ ಬದಲಿಗೆ, ಮಾಜಿ ಸಂಸದ ಹಾಜಿ ನೂರುಲ್‌ ಇಸ್ಲಾಂ ಅವರನ್ನು ಕಣಕ್ಕಿಳಿಸಿದೆ. ಅದೇ ರೀತಿ, ಪ್ರಶ್ನೆ ಕೇಳಲು ಲಂಚ ಪ್ರಕರಣದಿಂದ ಸಂಸದ ಸ್ಥಾನದಿಂದ ವಜಾ ಗೊಂಡಿದ್ದ ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಕೃಷ್ಣಾನಗರ ಕ್ಷೇತ್ರದಿಂದ ಸ್ಪರ್ಧಿಸಲು ಸತತ ಎರಡನೇ ಬಾರಿಗೆ ಟಿಕೆಟ್ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.