ಭುಬನೇಶ್ವರ್: ಒಡಿಶಾದ ರಾಯಗಢ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವಮಳೆಯಿಂದಾಗಿ ಭೂಪ್ರದೇಶ ಜಲಾವೃತವಾಗಿವೆ. ರೈಲ್ವೆ ಹಳಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಭುಬನೇಶ್ವರ್- ಜಗದಲ್ಪುರ್ ಹೀರಾಖಂಡ್ ಎಕ್ಸ್ಪ್ರೆಸ್ ರೈಲ್ವೆ ಹಳಿಯಲ್ಲಿ ಸಿಲುಕಿಕೊಂಡ ಘಟನೆ ಶನಿವಾರ ನಡೆದಿದೆ.
ರೈಲ್ವೆ ಹಳಿಯಲ್ಲಿ ರೈಲು ಸಿಲುಕಿಕೊಂಡಿರುವ ದೃಶ್ಯವನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ಈ ಘಟನೆ ನಂತರ ಜಗದಲ್ಪುರದಿಂದಭುಬನೇಶ್ವರ್ಹೋಗುವ ರೈಲು ಸ್ಥಗಿತಗೊಳಿಸಿ, ಕೋರಟ್ಪುರ್ ನಿಂದಭುಬನೇಶ್ವರ್ ವರೆಗೆ ಮಾತ್ರ ರೈಲು ಸಂಚಾರ ಕಲ್ಪಿಸಲಾಯಿತು.
ಒಡಿಶಾದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಲ್ಯಾಣಿ ನದಿ ತುಂಬಿ ಹರಿಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.