ADVERTISEMENT

‘ಸುಪ್ರೀಂ’ ಕ್ಷಮೆಯಾಚನೆಗೆ ನಿರಾಕರಿಸಿದ ಕುನಾಲ್‌ ಕಾಮ್ರಾ

ಪಿಟಿಐ
Published 29 ಜನವರಿ 2021, 16:06 IST
Last Updated 29 ಜನವರಿ 2021, 16:06 IST
ಕುನಾಲ್‌ ಕಾಮ್ರಾ
ಕುನಾಲ್‌ ಕಾಮ್ರಾ   

ನವದೆಹಲಿ: ಹಾಸ್ಯಕ್ಕೆ ಯಾವ ರಕ್ಷಣೆಯೂ ಬೇಕಿಲ್ಲ ಎಂದು ಹೇಳಿರುವ ಸ್ಟ್ಯಾಂಡ್‌ ಅಪ್‌ ಹಾಸ್ಯಕಲಾವಿದ ಕುನಾಲ್‌ ಕಾಮ್ರಾ, ತಮ್ಮ ವಿರುದ್ಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್‌ ಕ್ಷಮೆ ಯಾಚಿಸಲು ಶುಕ್ರವಾರ ನಿರಾಕರಿಸಿದ್ದಾರೆ.

ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಗೆ ಜಾಮೀನು ಮಂಜೂರು ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್‌ ಹಾಗೂ ಅದರ ನ್ಯಾಯಮೂರ್ತಿಗಳ ವಿರುದ್ಧ ಕಾಮ್ರಾ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ವಿವರಣೆ ನೀಡುವಂತೆ ನ್ಯಾಯಾಲಯವು ಕಾಮ್ರಾಗೆ ಹೋದ ತಿಂಗಳು ನೋಟಿಸ್‌ ಕೂಡ ಕೊಟ್ಟಿತ್ತು.

‘ಸುಪ್ರೀಂಕೋರ್ಟ್‌ ಮೇಲೆ ಜನ ಇಟ್ಟಿರುವ ನಂಬಿಕೆಯನ್ನು ಕುಗ್ಗಿಸಬೇಕೆಂಬ ದುರುದ್ದೇಶದಿಂದ ನಾನು ಆ ರೀತಿ ಟ್ವೀಟ್‌ ಮಾಡಿರಲಿಲ್ಲ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಕಾಮ್ರಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.