ADVERTISEMENT

ಭೋಲೆನಾಥನ ಭಕ್ತನಾದ ನನಗೆ ಮಾಟ ಮಾಡಿಸಿದರೆ ಏನೂ ಆಗಲ್ಲ: ಉತ್ತರಪ್ರದೇಶ ಬಿಜೆಪಿ ಶಾಸಕ

ಐಎಎನ್ಎಸ್
Published 2 ಅಕ್ಟೋಬರ್ 2023, 2:41 IST
Last Updated 2 ಅಕ್ಟೋಬರ್ 2023, 2:41 IST
<div class="paragraphs"><p>ಲಖೀಂಪುರ ಖೇರಿ ಜಿಲ್ಲೆಯ ಮೊಹಮ್ಮದಿ ಕ್ಷೇತ್ರದ&nbsp;ಶಾಸಕ&nbsp;ಲೋಕೇಂದ್ರ ಪ್ರತಾಪ್‌ ಸಿಂಗ್‌ ಹಂಚಿಕೊಂಡಿರುವ ಚಿತ್ರ</p></div>

ಲಖೀಂಪುರ ಖೇರಿ ಜಿಲ್ಲೆಯ ಮೊಹಮ್ಮದಿ ಕ್ಷೇತ್ರದ ಶಾಸಕ ಲೋಕೇಂದ್ರ ಪ್ರತಾಪ್‌ ಸಿಂಗ್‌ ಹಂಚಿಕೊಂಡಿರುವ ಚಿತ್ರ

   

ಚಿತ್ರಕೃಪೆ: Facebook / Lokendra Pratap Singh 

ಲಖನೌ: ಕೆಲವರು ನನ್ನನ್ನು ಟಾರ್ಗೆಟ್ ಮಾಡಲು ಮಾಟ ಮಂತ್ರದ ತಂತ್ರ ಬಳಸಿದ್ದಾರೆ. ದೇವರು ಅವರಿಗೆ ತಿಳಿವಳಿಕೆ ನೀಡಲಿ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಲೋಕೇಂದ್ರ ಪ್ರತಾಪ್‌ ಸಿಂಗ್‌ ಹೇಳಿದ್ದಾರೆ.

ADVERTISEMENT

ಕೆಂಪು ಬಣ್ಣದ ಬಟ್ಟೆಯಲ್ಲಿ ತಮ್ಮ ಫೋಟೊ, ಕೆಲವು ರೀತಿಯ ಧಾನ್ಯಗಳು, ತೀರ್ಥ, ಕುಂಕುಮ ಹಾಗೂ ಇನ್ನಿತರ ವಸ್ತುಗಳು ಇರುವ ಚಿತ್ರವನ್ನು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿರುವ ಸಿಂಗ್‌, 'ನಮ್ಮ ವಿಜ್ಞಾನವು ಚಂದ್ರನನ್ನು ತಲುಪಿದೆ. ಆದಾಗ್ಯೂ ಕೆಲವರು ಇಂಥ ತಂತ್ರವನ್ನು ನಂಬಿಕೊಂಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಲಖೀಂಪುರ ಖೇರಿ ಜಿಲ್ಲೆಯ ಮೊಹಮ್ಮದಿ ಕ್ಷೇತ್ರದ ಶಾಸಕರಾಗಿರುವ ಅವರು, ನಾನು ಭೋಲೆನಾಥನ (ಶಿವ) ಅದ್ವಿತೀಯ ಭಕ್ತ, ಇಂತಹ ತಂತ್ರಗಳಿಂದ ನನಗೆ ಏನೂ ಆಗದು ಎಂಬುದು ಅವರಿಗೆ ಗೊತ್ತಿಲ್ಲ. ದೇವರು ಅವರಿಗೆ ತಿಳಿವಳಿಕೆ ನೀಡಲಿ ಎಂದು ಆಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.