ಗಾಜಿಪುರ: ಉತ್ತರ ಪ್ರದೇಶದ ಗಾಜಿಪುರದಲ್ಲಿ ಬುಧವಾರ ಸಂಭವಿಸಿದ್ದ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಬುಧವಾರ ಸಂಜೆ ವಾರದ ಸಂತೆಯಿಂದ ಹಿಂತಿರುಗುತ್ತಿದ್ದ ವೇಳೆ ಗಂಗಾ ನದಿಯಲ್ಲಿ ದೋಣಿ ದುರಂತ ಸಂಭವಿಸಿತ್ತು. 24 ಜನರ ಪೈಕಿ 17 ಮಂದಿಯನ್ನು ರಕ್ಷಿಸಲಾಗಿತ್ತು.
ಬುಧವಾರ ಸಂಜೆಯೇ ಮುಳುಗು ತಜ್ಞರು ಎರಡು ಶವಗಳನ್ನು ಹೊರತೆಗೆದಿದ್ದರು. ಈಗ ಮತ್ತೆ ಐದು ಶವಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಐವರು ಮಕ್ಕಳು ಸೇರಿದ್ದಾರೆ. ಮೃತಪಟ್ಟವರನ್ನು ಸಂಧ್ಯಾ ಕುಮಾರ್ (6),ಅಲಿಸಾ ಯಾದವ್ (5), ಅನಿತಾ ಪಾಸ್ವಾನ್ (10), ವಿಶಾಲ್ ಯಾದವ್ (10), ಸತ್ಯಂ (12), ನಗೀನಾ ಪಾಸ್ವಾನ್ (70) ಮತ್ತು ವಿಷಂಭರ್ ಗೌರ್ ಎಂದು ಗುರುತಿಸಲಾಗಿದೆ.
ಗಾಜಿಪುರ ಜಿಲ್ಲಾಡಳಿತವು ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ವಿಪತ್ತು ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.